Mysore
27
clear sky

Social Media

ಸೋಮವಾರ, 20 ಏಪ್ರಿಲ 2026
Light
Dark

ನಮ್ಮ ಪೂರ್ವಿಕರು ಜನರ ಭವಿಷ್ಯದ ದೃಷ್ಟಿಯಿಂದ ಕೆಲಸ ಮಾಡಿದ್ದಾರೆ: ಯತೀಂದ್ರಗೆ ಟಾಂಗ್‌ ಕೊಟ್ಟ ಸಂಸದ ಯದುವೀರ್‌

Yaduveer

ಮೈಸೂರು: ಮಹಾರಾಜರಿಗಿಂತ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿರುಗೇಟು ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಅಧಿಕಾರ ಸಿಕ್ಕರೆ ಜನರಿಗೋಸ್ಕರ ಕೆಲಸ ಮಾಡಬೇಕು. ಅದೇನು ಪಂದ್ಯಾವಳಿ ಅಲ್ಲ. ನಮ್ಮ ಕಾಲದಲ್ಲಿ ಜನರಿಗೆ ಕೊಟ್ಟ ಮಾತುಗಳಂತೆ ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು ಹೋಲಿಕೆ ಮಾಡಿಕೊಂಡು ಹೇಳಿಕೆ ಕೊಡುವ ಅವಶ್ಯಕತೆ ಇಲ್ಲ ಎಂದು ಒಡೆಯರ್‌ ಹೇಳಿದರು.

ರಾಜಪ್ರಭುತ್ವ ಪ್ರಜಾಪ್ರಭುತ್ವ ಯಾವುದೇ ಇದ್ರು ಜನರಿಗೋಸ್ಕರ ಕೆಲಸ ಮಾಡೋದು ಅಷ್ಟೇ. ನಾಲ್ವಡಿ, ಚಾಮರಾಜ ಒಡೆಯರ್ ಮಾಡಿರುವ ಕೆಲಸ ಜನರ ಹಿತಕ್ಕಾಗಿ. ಅವರು ತೋರಿಕೆಗೋಸ್ಕರ ಕೆಲಸ ಮಾಡಿಲ್ಲ. ಆದರಿಂದ ಈಗ ಒಂದು ಸರ್ವೇ ಮಾಡಲಿ. ಯಾರು ಏನೆಲ್ಲಾ ಕೆಲಸ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ.

ಇದಕ್ಕೆ ಜನರು ಕೂಡ ಉತ್ತರ ಕೊಡ್ತಾರೆ. ನಮ್ಮ ವಂಶದ ಬಗ್ಗೆ ನಾನು ಮಾತನಾಡುವುದರಲ್ಲಿ ಅರ್ಥ ಅಲ್ಲ. ಫೀಲ್ಡಿಗೆ ಇಳಿದು ಜನರ ಬಳಿ ಸರ್ವೇ ಮಾಡಿದ್ರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಇಂತಹ ಹೇಳಿಕೆಗಳಿಂದ ಜನರನ್ನು ಡೈವರ್ಟ್ ಮಾಡೋದೆ ಕಾಂಗ್ರೆಸ್‌ ಕೆಲಸ. ನಮ್ಮ ಪೂರ್ವಿಕರು ಜನರ ಭವಿಷ್ಯದ ಬಗ್ಗೆ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ.

ಕಾಂಗ್ರೆಸ್‌ನವರು ಬೀದಿಗಿಳಿದು ನೋಡಿದ್ರೆ ಯಾರ ಯಾರ ಕೆಲಸ ಏನು ಎಂಬುದು ಗೊತ್ತಾಗುತ್ತದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

Tags:
error: Content is protected !!