ಮೈಸೂರು: ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಮೊದಲು ಗೆದ್ದ ಶಾಸಕರು ಚುನಾವಣೆಯನ್ನೇ ಗೆದ್ದು ಬಂದಿರುತ್ತಾರೆ. ಅವರಿಗೂ ಕೂಡ ಸಾಕಷ್ಟು ಅನುಭವ ಇರುತ್ತದೆ. ನಾನು ಪತ್ರಕ್ಕೆ ಸಹಿ ಹಾಕಿಲ್ಲ. ಆದರೆ ನಾನು ಸ್ಥಳದಲ್ಲಿ ಇದ್ದಿದ್ದರೆ ಸಹಿ ಹಾಕುತ್ತಿದ್ದೆ. ನನಗೆ ಅವಕಾಶ ಸಿಗದಿದ್ದರೂ, ಮೊದಲು ಗೆದ್ದ ಯಾರಿಗಾದರೂ ಅವಕಾಶ ಸಿಗಲಿ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಬಣ. ನನಗೆ ರಾಹುಲ್ ಗಾಂಧಿ ಭೇಟಿ ಮಾಡಲು ಆಗಲ್ಲ. ಸುರ್ಜೇವಾಲಾ ಭೇಟಿ ಮಾಡುವ ಅನಿವಾರ್ಯತೆ ಬಂದಿಲ್ಲ. ನಮಗೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೇ ಸಾಕು. ಯಾವುದೇ ವಿಷಯ, ವಿಚಾರವಿದ್ದರೂ ಹೈಕಮಾಂಡ್ ಸ್ಪಷ್ಟಪಡಿಸಬೇಕು. ಜನರು ಗೊಂದಲದಲ್ಲಿದ್ದು, ಅಧಿಕಾರ ನಡೆಸಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.




