Mysore
23
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಈ ದೇವಾಲಯಗಳ ಪ್ರಸಾದ: ಯಾವುವು ಆ ದೇವಾಲಯ ಗೊತ್ತಾ.?

ಬೆಂಗಳೂರು: ಮುಜರಾಯಿ ಇಲಾಖೆಯ ಇ-ಪ್ರಸಾದ ಯೋಜನೆಗೆ ಬೇಡಿಕೆ ಹೆಚ್ಚಾಗಿದ್ದು, ಇನ್ನಷ್ಟು ದೇವಾಲಯಗಳ ಪ್ರಸಾದವನ್ನು ಆನ್‌ ಲೈನ್‌ ಮೂಲಕ ಮನೆ ಮನೆಗೂ ತಲುಪಿಸಲು ಇಲಾಖೆ ಮುಂದಾಗಿದೆ.

ಇ-ಪ್ರಸಾದ ಯೋಜನೆಗೆ ರಾಜ್ಯದ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಏಳು ದೇವಸ್ಥಾನಗಳ ಪ್ರಸಾದಕ್ಕೆ ಬೇಡಿಕೆ ಹೆಚ್ಚಾಗಿದೆ.

ಪ್ರಾಯೋಗಿಕವಾಗಿ 14 ದೇವಸ್ಥಾನಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಈಗ ಮತ್ತಷ್ಟು ದೇವಸ್ಥಾನಗಳನ್ನು ಈ ಯೋಜನೆಗೆ ಸೇರಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.

ಈ ಯೋಜನೆಗೆ ಮೈಸೂರಿನ ಚಾಮುಂಡಿಬೆಟ್ಟ, ಕಟೀಲು ದುರ್ಗಾಪರಮೇಶ್ವರಿ, ಘಾಟಿ ಸುಬ್ರಹ್ಮಣ್ಯ, ಮಂಗಳೂರಿನ ಸೌತಡ್ಕ ಗಣಪತಿ ದೇವಸ್ಥಾನಗಳು ಸಹ ಸೇರಿದ್ದು, ಮನೆಗೆ ಈ ದೇವಸ್ಥಾನಗಳ ಪ್ರಸಾದವನ್ನು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಬಹುದಾಗಿದೆ.

 

 

Tags:
error: Content is protected !!