Mysore
25
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಮೈಸೂರು | ಉಯಯಗಿರಿ, ಕುವೆಂಪುನಗರಕ್ಕೆ ಮತ್ತೊಂದು ಠಾಣೆ, ಅಗತ್ಯ ಸೌಲಭ್ಯಕ್ಕೆ ಬದ್ಧ ; ಹೋಂ ಮಿನಿಸ್ಟರ್‌

ಮೈಸೂರು : ಬೆಂಗಳೂರಿನಲ್ಲಿ ಸಂಚಾರ ಉಲ್ಲಂಘನೆಯ ಪ್ರಕರಣಗಳಲ್ಲಿ ವಸೂಲಾಗುವ ಶುಲ್ಕದ ಮೊತ್ತದಲ್ಲಿ ಶೇ.50ರಷ್ಟು ಸರ್ಕಾರಕ್ಕೆ ಮತ್ತು ಇಲಾಖೆಯಲ್ಲಿ ಬಳಸಲಾಗುತ್ತಿದ್ದು, ಅದೇ ರೀತಿ ಮೈಸೂರಿನಲ್ಲಿ ನೀಡುವ ಬಗ್ಗೆ ಪರಿಶೀಲಿಸುತ್ತೇನೆ. ಒಂದು ವೇಳೆ ಅವಕಾಶ ಇದ್ದರೆ ಅನುಮೋದನೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಮೈಸೂರು ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನಲ್ಲಿ ಸಂಚಾರ ಉಲ್ಲಂಘನೆಯ ಪ್ರಕರಣಗಳಲ್ಲಿ ಸಂಗ್ರಹವಾಗುವ ಶುಲ್ಕದಲ್ಲಿ ಸರ್ಕಾರಕ್ಕೆ ಶೇ.50ರಷ್ಟು ಕೊಟ್ಟು,ಉಳಿದ ಶೇ.50ನ್ನು ಇಲಾಖೆಗೆ ಬಳಸಲಾಗುತ್ತಿದೆ. ಅದೇ ರೀತಿ ಮೈಸೂರಿನಲ್ಲೂ ಅವಕಾಶ ಮಾಡಿಕೊಡುವಂತೆ ಶಾಸಕ ತನ್ವೀರ್ ಸೇಠ್ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಪರಿಶೀಲಿಸಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಒಂದು ವೇಳೆ ಅವಕಾಶ ಇದ್ದರೆ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕುವೆಂಪುನಗರದಲ್ಲಿ ಮತ್ತೊಂದು ಸಂಚಾರ ಪೊಲೀಸ್ ಠಾಣೆ ತೆರೆಯಲು ಮನವಿ ಬಂದಿದ್ದು, ಪರಿಶೀಲನೆ ನಡೆಸಿ ವರದಿ ಕೊಡುವಂತೆ ಆಯುಕ್ತರಿಗೆ ಹೇಳಿದ್ದೇನೆ. ಸಕರಾತ್ಮಕವಾಗಿ ವರದಿ ಬಂದರೆ ಖಂಡಿತ ಅನುಮತಿ ಕೊಡಲಾಗುವುದು. ಅದೇ ರೀತಿ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಯ ದೊಡ್ಡದಾಗಿದ್ದರಿಂದ ಮತ್ತೊಂದು ಠಾಣೆಯನ್ನು ಕೊಡದೆ ವಿಭಜಿಸಲಾಗಿದೆ. ಈಗ ವಿಭಜನೆಗೊಂಡಿರುವ ಠಾಣೆಗೆ ಶೀಘ್ರದಲ್ಲೇ ಬೇಕಾದ ಸಿಬ್ಬಂದಿ, ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ನುಡಿದರು.

ಮೈಸೂರು ಬಹಳ ವೇಗವಾಗಿ ಬೆಳೆಯುತ್ತಿದೆ. ಗ್ರೇಟರ್ ಮೈಸೂರು ಮಾಡುತ್ತಿದ್ದಾರೆ. ಬೆಂಗಳೂರನ್ನು ಡಿ.ಕೆ.ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಮಾಡಿದರು. ಈಗ ಸಿದ್ದರಾಮಯ್ಯ ಅವರು ಗ್ರೇಟರ್ ಮೈಸೂರು ಮಾಡಲು ತೀರ್ಮಾನಿಸಿದ್ದಾರೆ. ಮೈಸೂರಿನ ಜನಸಂಖ್ಯೆ 15ಲಕ್ಷ ಇದ್ದರೆ, ಹದಿನೆಂಟು ಲಕ್ಷ ವಾಹನಗಳು ಇವೆ. ಒಬ್ಬೊಬ್ಬ ಒಂದರಿಂದ ಎರಡು ವಾಹನಗಳನ್ನು ಹೊಂದಿದ್ದಾರೆ. ಪ್ರತಿನಿತ್ಯ ಅಪರಾಧ ಚಟುವಟಿಕೆ ನಡೆಯುತ್ತದೆ. ಸಂಚಾರ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತದೆ ಎಂದರು.

 

Tags:
error: Content is protected !!