Mysore
22
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಮೈಸೂರು | ಭಾರಿ ಮಳೆ ; ಕೆಆರ್ ಠಾಣೆಗೆ ನುಗ್ಗಿದ ನೀರು

ಮೈಸೂರು : ನಗರದಲ್ಲಿ ಗುರುವಾರ ಸಂಜೆ ವೇಳೆಗೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅಗ್ರಹಾರದಲ್ಲಿ ಇರುವ ಕೃಷ್ಣರಾಜ ಪೊಲೀಸ್ ಠಾಣೆಯ ಆವರಣಕ್ಕೆ ಮಳೆ ನೀರು ನುಗ್ಗಿದೆ.

ಇದರ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ಠಾಣೆಯ ಒಳಗೆ ತೆರಳಲು ಪೊಲೀಸರಿಗೂ ಸಾಧ್ಯವಾಗಲಿಲ್ಲ. ಠಾಣೆಯ ಮುಂದೆ ಅವೈಜ್ಞಾನಿಕ ಮೋರಿ ಕಾಮಗಾರಿ ನಡೆದಿರುವುದರಿಂದ ಮಳೆ ಬಂದಾಗ ಈ ಸಮಸ್ಯೆ ಮಾಮೂಲು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

ಉಕ್ಕಿ ಹರಿದ ಮ್ಯಾನ್ ಹೋಲ್: ಇನ್ನು ನಗರದ ಅಗ್ರಹಾರ, ಚಾಮರಾಜ ಜೋಡಿ ರಸ್ತೆಯ ಕೆಲವೆಡೆ ಮ್ಯಾನ್ ಹೋಲ್ ಉಕ್ಕಿ ಹರಿದ ಪರಿಣಾಮ ರಸ್ತೆಯಲ್ಲಿ ಕೊಳಚೆ ನೀರು ಹರಿಯುವಂತಾಗಿತ್ತು. ಪೌರ ಕಾರ್ಮಿಕರು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಸರಿಪಡಿಸುತ್ತಿದ್ದುದು ಕಂಡುಬಂತು.

ಜೋರು ಮಳೆಗೆ ನಗರದ ಅನೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತಾದರೂ ಸೆಸ್ಕ್ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ದುರಸ್ತಿಗೊಳಿಸುತ್ತಿದ್ದುದು ಕಂಡುಬಂತು.

Tags:
error: Content is protected !!