Mysore
22
clear sky

Social Media

ಭಾನುವಾರ, 15 ಮಾರ್ಚ್ 2026
Light
Dark

ಓದುಗರ ಪತ್ರ | ಸ್ವಯಂ ಘೋಷಿತ ವಿಶ್ವನಾಯಕನ ದ್ವಂದ್ವ ನೀತಿ

ಕೆಲವು ದಿನಗಳ ಹಿಂದೆ ತಾನು ಇತರ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾ, ಅದಕ್ಕಾಗಿ ತಮಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕೆಂದು ಹಂಬಲಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದ್ವಂದ್ವ ನೀತಿ ಈಗ ಬಯಲಾಗಿದೆ.

ಶಾಂತಿಯ ಮಂತ್ರ ಜಪಿಸುತ್ತಲೇ ಈಗ ಅವರೇ ಇರಾನ್ ಮೇಲೆ ಯುದ್ಧ ಸಾರುತ್ತಿರುವುದು ಜಗತ್ತಿನ ದುರಂತ. ಈ ಯುದ್ಧದ ಹಪಾಹಪಿಯಿಂದಾಗಿ ಅಮಾಯಕರ ಸಾವು- ನೋವು ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು, ಅನಿಲ ಪೂರೈಕೆ ವ್ಯತ್ಯಯ ಮತ್ತು ಷೇರು ಮಾರುಕಟ್ಟೆಯ ಕುಸಿತದಿಂದಾಗಿ ಇಡೀ ವಿಶ್ವದ ಆರ್ಥಿಕತೆ ಅಲ್ಲೋಲ ಕಲ್ಲೋಲವಾಗಿದೆ. ಅಧಿಕಾರದ ಅಮಲಿನಲ್ಲಿ ಶಾಂತಿಭಂಗ ಮಾಡುತ್ತಿರುವ ಇಂತಹ ನಾಯಕರಿಗೆ ವಿಶ್ವಸಂಸ್ಥೆ ಮತ್ತು ಜಾಗತಿಕ ಸಮುದಾಯವು ಬುದ್ಧಿ ಹೇಳಬೇಕಿದೆ. ಪ್ರಶಸ್ತಿಗಾಗಿ ಅಂಗಲಾಚುವವರು ಮೊದಲು ರಕ್ತಪಾತ ನಿಲ್ಲಿಸಿ ನೈಜ ಶಾಂತಿ ಸ್ಥಾಪಿಸಲು ಮುಂದಾಗಲಿ.

-ಬಿ. ಗಣೇಶ, ಕೆ. ಜಿ. ಕೊಪ್ಪಲು,ಮೈಸೂರು

Tags:
error: Content is protected !!