ಮೈಸೂರಿನ ಇನ್ಫೊಸಿಸ್ ಸಂಸ್ಥೆಯ ಆವರಣದಲ್ಲಿ ಚಿರತೆ ಕಾಣಿಸಿಕೊಂಡು ೯ ದಿನಗಳಾಗಿವೆ. ಅಷ್ಟೂ ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಆದರೆ, ಪ್ರಯೋಜನವಾಗಿಲ್ಲ.
ಕಾಡಂಚಿನ ಗ್ರಾಮಗಳು ಅಥವಾ ಬೆಟ್ಟಗಳ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡರೆ ಎರಡು – ಮೂರು ದಿನಗಳಲ್ಲಿಯೇ ಸೆರೆ ಸಿಕ್ಕುತ್ತವೆ. ಅಂದರೆ ಇನೊಸಿಸ್ನಲ್ಲಿ ಕಾಣಿಸಿಕೊಂಡಿರುವ ಚಿರತೆ ಅತಿ ಬುದ್ಧಿವಂತಿಕೆಯಿಂದ ಪಾರಾಗುತ್ತಿದೆಯೇ ಎಂಬ ಅನುಮಾನ ಉಂಟಾಗಿದೆ. ಆದರೆ, ಇಷ್ಟು ದಿನಗಳಾದರೂ ಚಿರತೆ ಸಿಗದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಬಹುಶಃ ಚಿರತೆ ಅಲ್ಲಿಂದ ಕಾಲ್ಕಿತ್ತಿರಬಹುದು. ಅರಣ್ಯ ಇಲಾಖೆಯವರು ಸಮಯ ಮತ್ತು ಹಣವನ್ನು ವ್ಯರ್ಥವಾಗಿ ವ್ಯಯಿಸುತ್ತಿದ್ದಾರೆಯೇ ಸಂಬಂಧಪಟ್ಟವರು ಯೋಚಿಸಬೇಕು.
-ಜಿ.ಗಂಭೀರ್ಕುಮಾರ್, ಹೆಬ್ಬಾಳು, ಮೈಸೂರು.





