Mysore
23
overcast clouds

Social Media

ಬುಧವಾರ, 17 ಜೂನ್ 2026
Light
Dark

ಸೂರ್ಯಗ್ರಹಣ: ಉಪಾಹಾರ ಸೇವನೆ ಮೌಢ್ಯ ಅಳಿಸಲು ಹಲವು ಪ್ರಗತಿಪರರ ಹೆಜ್ಜೆ

ಮೈಸೂರು: ಸೂರ್ಯಗ್ರಹಣ ಕಾರಣದಿಂದ ನಗರದ ಬಹುತೇಕ ಮಂದಿ ಮಂಗಳವಾರ ಮಧ್ಯಾಹ್ನದ ನಂತರ ಹೊರಗೆ ಬಾರದೆ ಮನೆಯಲ್ಲೇ ಇದ್ದರೆ, ಹಲವು ಪ್ರಗತಿಪರರು ಬೀದಿಗೇ ಬಂದು ಆರಾಮವಾಗಿ ಉಪಾಹಾರ ಸೇವಿಸಿದರು!

ನಗರದ ಅಶೋಕಪುರಂ ಸನಿಹದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದ ಬಳಿ ಇರುವ ಚೈತ್ರ ಮಿಲ್ಕ್ ಸೆಂಟರ್ ಮುಂಭಾಗದಲ್ಲಿ ಸೂರ್ಯಗ್ರಹಣ ಪ್ರಕ್ರಿಯೆ ಸಮಯದಲ್ಲೇ ಲೇಖಕ ಸಿದ್ದಸ್ವಾಮಿ ಅವರ ನೇತೃತ್ವದಲ್ಲಿ ಜಮಾವಣೆಗೊಂಡ ಹಲವು ಪ್ರಗತಿಪರರು, ಉಪ್ಪಿಟ್ಟು, ಕೇಸರಿಬಾತ್ ಸೇವಿಸಿದರು.

ಸೂರ್ಯಗ್ರಹಣ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು, ಆಹಾರ ಸೇವಿಸಬಾರದು ಎಂಬುದು ಮೌಢ್ಯತನದ ಪರಮಾವಧಿ. ಅದನ್ನು ಬಯಲು ಮಾಡುವ ಉದ್ದೇಶದಿಂದ ಈ ಉಪಾಹಾ ಸೇವನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಪ್ರಗತಿಪರರು ಹೇಳಿದ್ದಾರೆ.

ನಗರಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಕವಿ ಹೊರಳವಾಡಿ ನಂಜುಂಡಸ್ವಾಮಿ, ಪಿ.ರಾಜು ಸೇರಿದಂತೆ ೨೦ಕ್ಕೂ ಹೆಚ್ಚು ಮಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!