Mysore
23
overcast clouds
Light
Dark

ಸಾವರ್ಕರ್ ಅವರ ದೇಶಪ್ರೇಮ, ತತ್ವ ಆದರ್ಶಗಳು ಅನುಕರಣೀಯ : ಜನ ಧ್ವನಿ ಬಿ.ವೆಂಕಟೇಶ್

ಹನೂರು: ಬಾಲ್ಯದಿಂದಲೇ ಅಪಾರವಾದ ದೇಶಭಕ್ತಿಯನ್ನು ಹೊಂದಿದ್ದ ಸಾವರ್ಕರ್ ಅಂಥ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ದಿಸೆಯಲ್ಲಿ ಬಿಜೆಪಿ ಸಾವರ್ಕರ್ ರಥಯಾತ್ರೆಯನ್ನು ಕೈಗೊಂಡಿರುವುದು ಶ್ಲಾಘನೀಯ ವಿಚಾರ ಎಂದು ಬಿಜೆಪಿ ಜಿಲ್ಲಾ ಒಬಿ ಸಿ ಸಂಯೋಜಕ ಜನ ಧ್ವನಿ ಬಿ.ವೆಂಕಟೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಕೌದಳ್ಳಿ ಜಿಪಂ ಕ್ಷೇತ್ರಕ್ಕೆ ಆಗಮಿಸಿದ ಸಾವರ್ಕರ್ ರಥಯಾತ್ರೆಯನ್ನು ಜ್ಯೋತಿಪುರದಲ್ಲಿ ಸ್ವಾಗತಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಕೆಲವು ಮಹನೀಯರ ಪರಿಚಯ ಇಂದಿನ ಪೀಳಿಗೆಗೆ ಅತ್ಯವಶ್ಯಕವಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಸಾವರ್ಕರ್ ಅವರ ದೇಶಪ್ರೇಮ, ತತ್ವ ಆದರ್ಶಗಳು ಅನುಕರಣೀಯ ಎಂದರು.

ಅದ್ದೂರಿ ಸ್ವಾಗತ : ಕೌದಳ್ಳಿ ಸಮೀಪದ ಜ್ಯೋತಿಪುರ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿ.ವೆಂಕಟೇಶ್ ನೇತೃತ್ವದಲ್ಲಿ ಸಾವರ್ಕರ್ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಬಿಜೆಪಿ ಹಾಗೂ ಕೇಸರಿ ಬಾವುಟ ಹಾಗೂ ಸಾರ್ವರ್ಕರ್ ಭಾವಚಿತ್ರವನ್ನು ಪ್ರದರ್ಶಿಸುತ್ತಾ, ಸಾರ್ವರ್ಕರ್ ಅವರ ಭಾವಚಿತ್ರಕ್ಕೆ ಹೂಮಳೆಗೈದು ಅಪಾರ ಸಂಖ್ಯೆಯ ಕಾರ್ಯಕರ್ತರು ರಥಯಾತ್ರೆಯನ್ನು ಬರಮಾಡಿಕೊಂಡರು.
ಮಳೆಯನ್ನೂ ಲೆಕ್ಕಿಸದ ಬಿಜೆಪಿಗರು: ಬಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ಸೇರಿದಂತೆ ಅನೇಕರು ಮಳೆಯನ್ನು ಲೆಕ್ಕಿಸದೆ ಸಾರ್ವರ್ಕರ್ ಅವರ ಯಶೋಗಾಥೆಯನ್ನು ಸಾರುವ ಕುರಿತಾದ ವಿಡಿಯೋ ಸಂದೇಶವನ್ನು ಬೃಹತ್ ಪರದೆ ಮೂಲಕ ವೀಕ್ಷಿಸಿದರು. ಸ್ವತಹ ಬಿ.ವೆಂಕಟೇಶ್ ಅವರೇ ನೆರೆದಿದ್ದ ಕಾರ್ಯಕರ್ತರಿಗೆ ಉಪಹಾರವನ್ನು ಬಡಿಸುವ ಮೂಲಕ ಕಾರ್ಯಕರ್ತರ ಖುಷಿಯನ್ನು ದುಪ್ಪಟಗೊಳಿಸಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷರಾದ ಜಯಸುಂದರ್, ಹನೂರು ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷರಾದ ಕೃಷ್ಣಪ್ಪ, ಮಹದೇಶ್ವರ ಮಂಡಲ ಮಹಿಳಾ ಅಧ್ಯಕ್ಷರಾದ ಮೀನಾ, ಹನೂರು ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷರಾದ ರಾಜೇಶ್, ಮಹದೇಶ್ವರ ಬೆಟ್ಟ ಯುವ ಮೋರ್ಚಾ ಅಧ್ಯಕ್ಷರಾದ ಚಂದ್ರು, ಕುರಟ್ಟಿ ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಟರಾಜು, ಗ್ರಾಮ ಪಂಚಾಯತಿ ಸದಸ್ಯರುಗಳಾದ ವರಪ್ರಸಾದ್, ರಾಜಪ್ಪ, ಜಬಿವುಲ್ಲಾ, ಮಂಜು, ಸತ್ಯಗಾಲ ಉಮೇಶ್, ತಮ್ಮಯ್ಯ ಶೆಟ್ಟಿ, ಸಿಂಗನಲ್ಲೂರು ಮರಿಸ್ವಾಮಿ, ಮುಖಂಡರಾದ ಶಿವಪ್ಪ, ಕಾಮಗೆರೆ ಸುರೇಶ್, ಶಿವಣ್ಣ. ನಾಗರಾಜು, ಜಿನಕನಹಳ್ಳಿ ಮಹೇಶ್, ಪುಟ್ಟಸ್ವಾಮಿ, ಕೌದಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಸದಸ್ಯರಾದ ಸದಸ್ಯರು ಹಾಗೂ ಕೌದಳ್ಳಿ ಗ್ರಾಮಸ್ಥರು ಹಾಜರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ