ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಡಾ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆ ನಿರ್ಮಾಣ ಮತ್ತು ಅಪ್ಪು ವೃತ್ತಾ ಎಂಬ ಹೆಸರಿಡುವ ಅಭಿಯಾನವನ್ನು ಆರಂಭಿಸಲಾಗಿದ್ದು ಈ ಅಭಿಯಾನಕ್ಕೆ ಕೈಜೋಡಿಸಿ ಎಂದು ಕರೆ ನೀಡಿದ್ದಾರೆ.
ನಗರದ ಶಿವರಾಂ ಪೇಟೆಯ ಶಿವರಾಜ್ ಕುಮಾರ್ ಮತ್ತು ಅಪ್ಪು ಅಭಿಮಾನಿಗಳ ಸಂಘದ ಸಿಂಹದಮರಿ ಸೇವಾ ಟ್ರಸ್ಟ್ (ರಿ) ಅಭಿಯಾನವನ್ನು ಆರಂಭಿಸಿದ್ದು. ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆಯನ್ನು ಮೈಸೂರಿನ ದೇವರಾಜ ಅರಸು ರಸ್ತೆ ಮತ್ತು ಝಾನ್ಸಿ ಲಕ್ಷ್ಮೀಬಾಯಿ ರಸ್ತೆ ಸೇರುವ ಸ್ಥಳ(ಕಾಫಿಡೇ ಮುಂಭಾಗ)ದಲ್ಲಿ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಗೆ ಸಹಕಾರ ನೀಡಬೇಕೆಂದು ಎಲ್ಲ ಸಂಘ ಸಂಸ್ಥೆಗಳು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.