ನಗರ್ಲೆ: ನಂಜನಗೂಡು ತಾಲ್ಲೂಕು ನಗರ್ಲೆ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯುಷ್ ಇಲಾಖೆ ವತಿಯಿಂದ ನಡೆದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮವನ್ನು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಸಸ್ಯಗಳ ವಿತರಣೆ ಮಾಡಲಾಯಿತು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಗ್ರಾ.ಪಂ. ಅಧ್ಯಕ್ಷೆ ಸುಮನ್ರಾಜ್, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಪುಷ್ಪ, ಡಾ.ಅಶೋಕ್ ಕುಮಾರ, ಡಾ.ಶ್ವೇತ ಶಶಿಧರ್, ಉಪಾಧ್ಯಕ್ಷರಾದ ಭದ್ರನಾಯಕ, ಸದಸ್ಯರುಗಳಾದ ಎನ್.ಇ.ಪ್ರಮೋದ್ ಕುಮಾರ್, ಧರ್ಮೇಂದ್ರ ಮಾಜಿ ಅಧ್ಯಕ್ಷ ಎನ್.ಎಂ.ಮಹದೇವಸ್ವಾಮಿ, ಎನ್.ಕೆ.ನಂದೀಶ್, ಮುಖಂಡರುಗಳಾದ ನಾರಾಯಣ್, ಕಲ್ಮಳ್ಳಿ ಸುರೇಶ್ಬಾಬು, ವಿಜಯ್ ಕುಮಾರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಉಬೇದುಲ್ಲಾ ಖಾನ್, ಗೌರಿಶಂಕರ್, ಮಾಜಿ ಸದಸ್ಯರಾದ ಅಲ್ತಾಫ್ ಪಾಷ, ಮನು, ನರಸಿಂಹಮೂರ್ತಿ, ಪ್ರಜ್ವಲ್, ಶಿವರಾಂ, ಶಿವಕುಮಾರ್, ವೀರೇಂದ್ರ, ನಾರಾಯಣ್, ಪಿಡಿಒ ಈಶಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.





