ಎಚ್.ಡಿ.ಕೋಟೆ: ಕಬಿನಿ ಹಿನ್ನೀರಿನ ಕಾಡಂಚಿನ ಪ್ರದೇಶದಲ್ಲಿ ವನ್ಯಜಜೀವಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಕೆ.ಹೆಚ್.ಸುರೇಶ್ ಕುಮಾರ್ ಅಲಿಯಾಸ್ ಗಿರೀಶ್, ಎಂ.ಬಿ.ಮಧುಸೂದನ್ ಅಲಿಯಾಸ್ ಪ್ರಜ್ವಲ್ ಗೌಡ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಕಾರು, ಡಬಲ್ ಬ್ಯಾರಲ್ ಹಾಗೂ ಸಿಂಗಲ್ ಬ್ಯಾರಲ್ ಗನ್, 14 ಜೀವಂತ ಗುಂಡು, ಗನ್ ಪೌಡರ್, 6 ಉರುಳು ಸೇರಿದಂತೆ ಇನ್ನಿತರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇಬ್ಬರು ಆರೋಪಿಗಳು ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದ ಸಮೀಪ ಕಾರಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಪರಿಶೀಲನೆ ನಡೆಸಿದಾಗ ಬೇಟೆಗೆ ಹೊಂಚು ಹಾಕುತ್ತಿರುವುದು ಬಯಲಿಗೆ ಬಂದಿದೆ.




