ಮೈಸೂರು: ಜಿಲ್ಲೆಯ ವರಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಹುಂಡಿ ಗ್ರಾಮದಲ್ಲಿ ಹಾಡುಹಗಲೇ ಹುಲಿಯೊಂದು ಪ್ರತ್ಯಕ್ಷವಾಗಿದೆ.
ಮೂಡಲಹುಂಡಿ ಗ್ರಾಮ ಉದ್ಭವ ಮಾದೇಶ್ವರ ದೇವಾಲಯದ ಬಳಿ ಹುಲಿರಾಯ ಪ್ರತ್ಯಕ್ಷವಾಗದ್ದು, ಗ್ರಾಮದ ನಡುರಸ್ತೆಯಲ್ಲೇ ಓಡಾಡುತ್ತಿರುವ ಹುಲಿರಾಯನ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಹಲವು ದಿನಗಳಿಂದ ಚಿರತೆ ಕಾಟದಿಂದ ಬೇಸತ್ತಿದ್ದ ಗ್ರಾಮಸ್ಥರಿಗೆ ಹುಲಿ ಪ್ರತ್ಯಕ್ಷದಿಂದಾಗಿ ಭಯಹುಟ್ಟಿದೆ.
ಹುಲಿ ವಿರಾಜಮಾನವಾಗಿ ಓಡಾಟ ಮಾಡುತ್ತಿರುವುದನ್ನು ವಾಹನ ಸವಾರರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ತಕ್ಷಣ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.





