ಮೈಸೂರು : ರಾತ್ರಿ ಸುರಿದ ಭಾರಿ ಮಳೆಗೆ ಕಬ್ಬು ಬೆಳೆ ಸಂಪೂರ್ಣ ಮುಳುಗಡೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುದ್ದು ಮಾದೇಗೌಡ ಎಂಬುವರಿಗೆ ಸೇರಿದ ಜಮೀನು ಜಲಾವೃತವಾಗಿದೆ. ರೈತ ಮುದ್ದು ಮಾದೇಗೌಡ ಸುಮಾರು 2 ಎಕರೆಯಷ್ಟು ಜಮೀನಿನಲ್ಲಿ ಕಬ್ಬು ಬೆಳೆದಿದ್ದಾರೆ. ಸಾಲ ಮಾಡಿ ಕಬ್ಬು ಬಿತ್ತನೆ ಮಾಡಿದ್ದು, ಕಬ್ಬಿನ ಬೆಳೆ ಮಳೆ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಕಣ್ಣೆದುರೇ ಕಬ್ಬು ಬೆಳೆ ಮುಳುಗಡೆಯಾಗಿದ್ದು, ದಿಕ್ಕು ತೋಚದೆ ಕಂಗಾಲಾಗಿದ್ದಾರೆ





