Mysore
23
overcast clouds
Light
Dark

ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಮುನಿಶ್ರೀ ಪ್ರಸನ್ನ ಸಾಗರ್ ಜೀ ಮಹಾರಾಜ್ !

ಮೈಸೂರು :   ಶ್ರೀ ಅಂತರ್ಮನ ಆಚಾರ್ಯ 108 ಮುನಿಶ್ರೀ ಪ್ರಸನ್ನ ಸಾಗರ್ ಜೀ ಮಹಾರಾಜ್ ಅವರು  ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿ ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ‌ ಭೇಟಿ ನೀಡಿದ್ದರು.

ಆಶ್ರಮದ ಶುಕವನಕ್ಕೆ ಭೇಟಿ ನೀಡಿದ ಆಚಾರ್ಯರಿಗೆ ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳು ಆತ್ಮೀಯವಾಗಿ ಸ್ವಾಗತಿಸಿದರು.

ಈ ವೇಳೆ ಆಚಾರ್ಯರ ಶಿಷ್ಯ ವೃಂದ. ಆಶ್ರಮದ ಪ್ರಸಾದ್, ಹಿರಿಯ ವಕೀಲರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಸಂಪಾದಕರಾದ ಎಚ್ ಎನ್ ವೆಂಕಟೇಶ್, ಹಿರಿಯ ವಕೀಲರು ಉದ್ಯಮಿಗಳಾದ ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಅವರ ಪತ್ನಿ ಶ್ರೀಮತಿ ಜಯಪದ್ಮ ಹೆಗ್ಡೆ, ಸೊಸೆ ಮೊನಿಷಾ ಹೆಗ್ಡೆ, ಪುತ್ರ ಅಭಿಷೇಕ ಹೆಗ್ಡೆ ಮಾಜಿ ಶಾಸಕ ದಿವಂಗತ ವಾಸು ಪುತ್ರ ರಿತೇಶ್ ಗೌಡ ಸೇರಿ ಹಲವರು ಹಾಜರಿದ್ದರು.