Mysore
25
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ದಿನೇಶ್‌ ಅಮಾನತು ಆದೇಶವೇ ಕಾಂಗ್ರೆಸ್‌ ಸರ್ಕಾರದ ಸುಸೈಡ್‌ ನೋಟ್‌ ಆಗಲಿದೆ: ಶ್ರೀವತ್ಸ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ದಿನೇಶ್‌ ಕುಮಾರ್‌ ಅವರ ಅಮಾನತು ಬೆನ್ನಲ್ಲೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಶಾಸಕ ಶ್ರೀವತ್ಸ ಅವರು ಅಮಾನತು ಆದೇಶವೇ ಕಾಂಗ್ರೆಸ್‌ ಸರ್ಕಾರದ ಸುಸೈಡ್‌ ನೋಟ್‌ ಆಗಲಿದೆ ಎಂದು ಹೇಳಿದ್ದಾರೆ.

ನಗರದಲ್ಲಿಂದು ಪಬ್ಲಿಕ್‌ ಟಿವಿ ಜೊತೆ ಮಾತನಾಡಿರುವ ಅವರು, ಹಿಂದಿನ ಆಯುಕ್ತ ದಿನೇಶ್‌ ಅವರ ಅಮಾನತು ಆದೇಶ ಹೊರಡಿಸಿರುವ ಸರ್ಕಾರದ ಆದೇಶ ಪ್ರತಿಯಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಅಕ್ರಮವಾಗಿ ಸೈಟು ಹಂಚಲಾಗಿದೆ ಎಂದು ಹೇಳಲಾಗಿದೆ. ಈ ಆದೇಶವನ್ನೇ ನಾವು ನ್ಯಾಯಾಲಯದ ಮುಂದೆಯೂ ನೀಡುತ್ತೇವೆ ಎಂದರು.

ಇನ್ನು ಅಧಿಕಾರಿ ದಿನೇಶ್‌ ಅವರನ್ನು ಅಮಾನತು ಮಾಡಲಾಗಿದೆ ಜೊತೆಗೆ ಬಂಧನ ಕೂಡಾ ಮಾಡಬೇಕಿದೆ ಎಂದು ಅವರು ಇದೇ ವೇಳೆ ಆಗ್ರಹಿಸಿದರು.

Tags:
error: Content is protected !!