Mysore
23
overcast clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಅಮ್ಮನ ಭಕ್ತರು ಶುಚಿತ್ವ ಮರೆತರಾ?

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ನಾಡ ಅಧಿದೇವತೆ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸಿ ಪುನೀತ ರಾಗುತ್ತಾರೆ. ಆದ್ರೆ ಇಲ್ಲಿಗೆ ಬರೋ ಜನರು ತ್ಯಾಜ್ಯ ನಿರ್ವಹಣೆ ಹಾಗೂ ಶುಚಿತ್ವದ ಕಡೆ ಹೆಚ್ಚು ಗಮನ ಹರಿಸಲ್ಲ ಅನ್ನೋ ವಿಚಾರ ಇದೀಗ ಮತ್ತೆ ಸಾಬೀತಾಗಿದೆ.

ಚಾಮುಂಡಿ ಮಹಾ ರಥೋತ್ಸವದ ಭಾಗವಾಗಿ ಭಾನುವಾರ ಸಾವಿರಾರು ಮಂದಿ ಬೆಟ್ಟಕ್ಕೆ ಅಗಮಿಸಿದ್ದರು. ಈ ವೇಳೆ ಹಲವರು ಮೆಟ್ಟಿಲಿನಿಂದ ಹತ್ತಿ ಅಮ್ಮನ ದರ್ಶನ ಪಡೆದಿದ್ರು. ಆದ್ರೆ, ಬೆಟ್ಟದ ಪಾದದ ಬಳಿ ಅಶುಚಿತ್ವ ತಾಂಡವವಾಡುತ್ತಿದ್ದು, ಪರಿಸರಕ್ಕೆ ಧಕ್ಕೆ ಆಗುತ್ತಿದೆ. ಜನ ಎಲ್ಲೆಂದರಲ್ಲಿ ಕಸ ಬಿಸಾಡಿ ಹೋಗಿದ್ದಾರೆ.

ರಾಶಿಗಟ್ಟಲೇ ಕಸದ ರಾಶಿ.! 

ಚಾಮುಂಡಿ ರಥೋತ್ಸವ ಹಿನ್ನೆಲೆ ಬೆಟ್ಟದ ಪಾದ ಮೆಟ್ಟಿಲು ಹತ್ತುವ ಜಾಗದಲ್ಲಿ ಹಲವಾರು ಮಂದಿ ಪ್ರಸಾದ ವಿತರಣೆ ಮಾಡ್ತಿದ್ದರು.. ಆದರೆ, ಪ್ರಸಾದ ಹಂಚಿದ ನಂತರ ಬಳಸಿದ್ದ ಪ್ರತಿಯೊಂದು ವಸ್ತುವನ್ನ ಬೇಕಾಬಿಟ್ಟಿ ಬಿಸಾಡಿ ಹೋಗಿದ್ದು, ಇದ್ರಿಂದ ರಾಶಿ ರಾಶಿ ಕಸ ಬಿದ್ದಿದೆ. ಅರಣ್ಯ ಪ್ರದೇಶಕ್ಕೆ ಸಾಕಷ್ಟು ಹಾನಿಯಾಗುವ ಆತಂಕ ಎದುರಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!