ಮೈಸೂರು : ಮೊಮ್ಮಗನನ್ನು ರಕ್ಷಿಸಲು ಹೋದ ತಾತ ಸೇರಿದಂತೆ ಮೂರು ಮಂದಿ ಕಾವೇರಿ ನದಿಯಲ್ಲಿ ಜಲಸಮಾಧಿಯಾಗಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಶನಿವಾರ ನಡೆದಿದೆ.
ಟಿ.ನರಸೀಪುರದ ಸ್ಥಳೀಯ ನಿವಾಸಿಗಳಾದ ಚೌಡಯ್ಯ(70), ಭರತ್(13), ಧನುಷ್ (10) ಮೃತರು. ನದಿ ತಟದಲ್ಲಿದ್ದ ಇಬ್ಬರು ಮಕ್ಕಳು ನೀರಿಗಿಳಿದಿದ್ದಾರೆ. ಈ ವೇಳೆ ತಾತ ಮಗುವನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ.
ಮೃತದೇಹಗಳನ್ನು ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.





