Mysore
21
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಆಸ್ತಿ ಇತಿಹಾಸ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

ಮೈಸೂರು : ಸಾಲ ತೀರಿಸಲು ಕಟ್ಟಿದ ಮನೆ ಮಾರಿಬಿಟ್ಟೆ ಒಂದು ದಿನವೂ ವಾಸ ಮಾಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ಮಹಾರಾಜ ಮೈದಾನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನಲ್ಲಿ ಸಾಲ ಮಾಡಿ ಮೈಸೂರಿನ ವಿಜಯನಗರದಲ್ಲಿ ಕಟ್ಟಿದ್ದ ಮನೆಯನ್ನು ಸಾಲ ತೀರಿಸಲು ಮಾರಿಬಿಟ್ಟೆ. ಇದು ನನ್ನ ಇತಿಹಾಸ ಎಂದು ಸಿದ್ದರಾಮಯ್ಯ ಹೇಳಿದರು.

ಮನೆ ಕಟ್ಟಲು ಕೋ-ಆಪರೇಟಿವ್‌ ಬ್ಯಾಂಕ್‌ನಿಂದ ಸಾಲ ಪಡೆದಿದ್ದೆ. ಸಾಲ ಕಟ್ಟಿಲ್ಲ ಎಂದು ಬ್ಯಾಂಕ್‌ನಿಂದ ನೋಟಿಸ್‌ ಬಂದಿತ್ತು. ಹೀಗಾಗಿ ಕಟ್ಟಿದ ಮನೆಯಲ್ಲಿ ಒಂದು ದಿನವೂ ವಾಸ ಮಾಡದೆ ಮನೆಯನ್ನೇ ಮಾರಿ ಬ್ಯಾಂಕ್‌ ಸಾಲ ತೀರಿಸಿದೆ ಎಂದರು.

ಈಗ ಒಂದು ಮನೆ ನಿರ್ಮಾಣ ಮಾಡುತ್ತಿದ್ದೇನೆ. ಅದನ್ನು ಹೊತುಪಡಿಸಿ ಮೈಸೂರಿನಲ್ಲಿ ನನ್ನ ಹೆಸರಿನಲ್ಲಿ ಒಂದೇ ಒಂದು ಸೈಟ್‌ ಇದ್ದರೆ ಯಾರಾದರು ತೋರಿಸಲಿ ಎಂದು ವಿಪಕ್ಷಗಳಿಗೆ ಸಾವಾಲು ಎಸೆದರು.

Tags: