Mysore
25
overcast clouds
Light
Dark

ಗುರುಕುಲ ಅಕಾಡೆಮಿ ಶಾಲೆಯ ಮಾನ್ಯತೆ ರದ್ದು

ಮೈಸೂರು: ತಾಲ್ಲೂಕಿನ ಕೊಪ್ಪಲೂರಿನ ಗುರುಕುಲ ಅಕಾಡೆಮಿ ಶಾಲೆಯ ಮಾನ್ಯತೆಯನ್ನು ರದ್ದು ಪಡಿಸಲಾಗಿದೆ.

2024-25 ನೇ ಶೈಕ್ಷಣಿಕ ವರ್ಷದಿಂದ ಈ ಶಾಲೆಯ ಮಾನ್ಯತೆ ರದ್ದಾಗಲಿದ್ದು, ಸಾರ್ವಜನಿಕರು  ಹಾಗೂ ಪೋಷಕರು  ಮಕ್ಕಳನ್ನು ಗುರುಕುಲ ಆಕಾಡೆಮಿ ಶಾಲೆಗೆ ದಾಖಲು ಮಾಡಬಾರದು ಹಾಗೂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಹತ್ತಿರದ ಅಧಿಕೃತ ಶಾಲೆಗಳಲ್ಲಿ ದಾಖಲಾತಿ ಮಾಡಬೇಕು ಎಂದು ತಾಲ್ಲೂಕು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.