Mysore
28
overcast clouds

Social Media

ಭಾನುವಾರ, 13 ಸೆಪ್ಟೆಂಬರ್ 2026
Light
Dark

ಈಜಲು ಹೋಗಿದ್ದ ಬಾಲಕ ನಾಪತ್ತೆ : ಸಾವನ್ನಪ್ಪಿರುವ ಶಂಕೆ

ಮೈಸೂರು : ಕೆರೆಯಲ್ಲಿ ಈಜಲು ಹೋದ 15 ವರ್ಷದ ಬಾಲಕ ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಹಸ್ವಾಳು ಗ್ರಾಮದ ಗರಿಕೆ ಕಟ್ಟೆ ಬಳಿಯ ಕೆರೆಗೆ ನವೀನ್ ಗೌಡ ಎಂಬ 15 ವರ್ಷದ ಬಾಲಕ ಈಜಲು ಹೋಗಿದ್ದ. ಆದರೆ ಈಗ ಬಾಲಕನ ಸುಳಿವೇ ಸಿಗುತ್ತಿಲ್ಲ.

ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನವೀನ್ ಮೈಸೂರಿನ ಬೋಗಾದಿ ನಿವಾಸಿಯಾಗಿದ್ದಾನೆ. ಮಂಜೇಗೌಡ ಆಶಾ ದಂಪತಿಯ ಪುತ್ರ. ಹಸ್ವಾಳು ಗ್ರಾಮದ ಅಜ್ಜಿ ಮನೆಗೆ ಬಂದಿದ್ದ ನವೀನ್, ತನ್ನ ಸ್ನೇಹಿತನ ಜೊತೆ ಈಜಲು ಹೋಗಿದ್ದ. ಈ ವೇಳೆ ಕೆರೆಯಲ್ಲಿ ಮುಳುಗಿರಬಹುದು ಎನ್ನಲಾಗುತ್ತಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!