ನಂಜನಗೂಡು : ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ನಂಜನಗೂಡಿನ ಚಾಮುಂಡಿ ಟೌನ್ಶಿಪ್ ಬಳಿ ನಡೆದಿದೆ.
ಶಿವಮೂರ್ತಿ ಹಾಗೂ ಸಿದ್ದಾರ್ಥ ಎಂಬುವವರೆ ಮೃತಪಟ್ಟವರು. ಇನ್ನೂ ಚೆನ್ನಾಜ್ಜಮ್ಮ ಎಂಬುವವರಿಗೆ ಗಂಭೀರ ಗಾಯಗಳಾಗಿದೆ.
ಇದನ್ನು ಓದಿ: ಗೂಡ್ಸ್ ವಾಹನ-ಬೈಕ್ ನಡುವೆ ಅಪಘಾತ : ಯುವಕ ಸಾವು
ಗಾಯಾಳುವನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಚಾಮರಾಜನಗರದ ಉದ್ದನೂರು ಗ್ರಾಮದ ನಿವಾಸಿಗಳು ಎಂಬ ಮಾಹಿತಿ ಲಭ್ಯವಾಗಿದ್ದು, ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





