Mysore
23
overcast clouds

Social Media

ಗುರುವಾರ, 18 ಜೂನ್ 2026
Light
Dark

ಸಫಾರಿ ವಾಹನಕ್ಕೆ ಅಡ್ಡ ಬಂದ ವ್ಯಾಘ್ರ  : ಪ್ರವಾಸಿಗರು ಫುಲ್‌ ಖುಷ್.!

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಾದ ಮನೋಜ್‌ ಗಾನಾ ಅವರ ಕ್ಯಾಮೆರಾ ಕಣ್ನಿಗೆ  ಬಹು ಅಪರೂಪದ ದೈತ್ಯ ಗಾತ್ರದ  ವ್ಯಾಘ್ರವೊಂದು ಸೆರೆಯಾಗಿದ್ದು  ಪ್ರವಾಸಿಗರು ಕೂಡ  ವ್ಯಾಘ್ರವನ್ನು ನೋಡಿ  ಸಂತಸ ವ್ಯಕ್ತಪಡಿಸಿದ್ದಾರೆ.

.ಸಫಾರಿಗೆ ತೆರಳಿದ್ದ ವೇಳೆಯಲ್ಲಿ ಬಿಸಿಲಿನ ಬೇಗೆಗೆ ನೀರಿನ ಹೊಂಡದಲ್ಲಿದ್ದ ಹುಲಿ ಸಫಾರಿ ಸಂಚರಿಸುವ ಮಾರ್ಗದಲ್ಲಿ ಪ್ರವಾಸಿಗರ ವಾಹನಕ್ಕೆ ಅಡ್ಡ ಬಂದಿದೆ. ಪ್ರವಾಸಿಗರನ್ನ ಕಂಡರೂ ಬೆಚ್ಚಿಬೀಳದೆ ವಾಹನದ ಬಳಿಯೇ  ವ್ಯಾಘ್ರ ಸುಳಿದಾಡಿದ್ದು ಇದರಿಂದ ಒಂದಿಷ್ಟು ಪ್ರವಾಸಿಗರು ಆತಂಕಕ್ಕೀಡಾದರೆ ಇನ್ನಷ್ಟು ಪ್ರವಾಸಿಗರು ಫುಲ್‌ ಖುಷ್‌ ಆಗಿದ್ದಾರೆ.ತಮ್ಮ ಮೊಬೈಲ್​ಗಳಲ್ಲಿ ಇನ್ನಷ್ಟು ವಿವಿಧ ಬಗೆಯ ಕಾಡುಪ್ರಾಣಿಗಳನ್ನುಕೂಡ ಸೆರೆ ಹಿಡಿದು ಸಂತಸ ವ್ಯಕ್ತಪಡಿಸಿದ್ದಾರೆ

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!