Mysore
29
clear sky

Social Media

ಗುರುವಾರ, 19 ಮಾರ್ಚ್ 2026
Light
Dark

ಮನ್`ಮುಲ್’ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್

Manmul president

ಮಂಡ್ಯ : ಗೆಜ್ಜಲಗೆರೆ ಮನ್`ಮುಲ್’ ನ ನೂತನ ಅಧ್ಯಕ್ಷರಾಗಿ ಯು.ಸಿ.ಶಿವಕುಮಾರ್ ಅಧಿಕಾರ ವಹಿಸಿಕೊಂಡರು.

ಸೋಮವಾರ ಮಧ್ಯಾಹ್ನ ಹಾಲು ಉತ್ಪನ್ನ ಘಟಕದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ದಾಖಲೆ ನೀಡಿ ಶುಭ ಹಾರೈಸಿದರು.

ಈ ವೇಳೆ ಅಧ್ಯಕ್ಷ ಯು.ಸಿ.ಶಿವಕುಮಾರ್ ಮಾತನಾಡಿ, ಮನ್’ಮುಲ್ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದು ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು‌.

ಒಕ್ಕೂಟದ ರೈತರ ಕ್ಷೇಮಾಭಿವೃದ್ಧಿ ನಿಧಿಯಿಂದ ಉತ್ಪಾದಕರ ಮಕ್ಕಳಿಗೆ ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆ ತೆರೆಯುವ ಅಲೋಚನೆ ಇದೆ ಎಂದರು.

ಇದನ್ನೂ ಓದಿ:- ಹೈಕಮಾಂಡ್‌ ಕರೆ: ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ

ಇದೇ ವೇಳೆ ನೂತನ ಅಧ್ಯಕ್ಷರನ್ನು ಒಕ್ಕೂಟದ ನಿರ್ದೇಶಕರು, ಅಧಿಕಾರಿಗಳು, ಬಂಧು ಮಿತ್ರರು ಅಭಿನಂದಿಸಿದರು.

ಈ ವೇಳೆ ಒಕ್ಕೂಟದ ನಿರ್ದೇಶಕರಾದ ಬೋರೇಗೌಡ, ಹರೀಶ್, ಸಾದೊಳಲು ಸ್ವಾಮಿ, ಶಿವಕುಮಾರ್, ಒಕ್ಕೂಟದ ಎಂ.ಡಿ.ಡಾ. ಮಂಜೇಶ್ ಸೇರಿದಂತೆ ಹಲವರು ಹಾಜರಿದ್ದರು‌.

Tags:
error: Content is protected !!