Mysore
28
broken clouds

Social Media

ಬುಧವಾರ, 29 ಏಪ್ರಿಲ 2026
Light
Dark

ರಾಜ್ಯ ಬಜೆಟ್‌ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಟೀಕೆ

H D Kumaraswamy

ಮಂಡ್ಯ: ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಕುಮಾರಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ಮೂರುವರೆ ಗಂಟೆ ಖುಷಿಯಿಂದ ಬಜೆಟ್‌ ಓದಿಲ್ಲ. ಪಾಪ ಕನ್ನಡದಲ್ಲಿ ಶಾಸಕರಿಗೆ ಸಂಧಿ ಪಾಠ ಮಾಡುತ್ತಿದ್ದರು. ಈಗ ಪಾಪ ಒಂದೊಂದು ಪದ ಬಳಕೆ ಮಾಡಲು ಶ್ರಮ ಪಡುತ್ತಿದ್ದರು ಎಂದು ಲೇವಡಿ ಮಾಡಿದರು.

ಇನ್ನು ನಿನ್ನೆಯ ಬಜೆಟ್‌ ಹೊಡೆತ ಜನರ ಮೇಲೆ ಹೇಗೆ ಬೀಳುತ್ತದೆ ನೋಡಬೇಕು. ಇದನ್ನು ದಾಖಲೆ ಬಜೆಟ್‌ ಎಂದು ಹೇಳಲು ಆಗಲ್ಲ. ಇದರ ಎಫೆಕ್ಟ್‌ ಮುಂದಿನ ದಿನಗಳಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ. ಕೇಂದರ ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟರೆ ಇವರ ಶ್ರಮ ಏನಿದೆ? ಹಿಂದಿನ ಸರ್ಕಾರದಲ್ಲಿ ತೀರ್ಮಾನ ಆಗಿದ್ದನ್ನು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Tags:
error: Content is protected !!