ಹನೂರು : ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರದ ಮುಂಭಾಗ ಭಕ್ತರು ಹಾಗೂ ಸಾರ್ವಜನಿಕರು ಚಪ್ಪಲಿಗಳನ್ನು ಬಿಡದಂತೆ ಕ್ರಮವಹಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡಿ ಬೆಟ್ಟ ನಂಜನಗೂಡು ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ಭಕ್ತರು ಚಪ್ಪಲಿ ಬಿಡುವುದಕ್ಕಾಗಿ ಕೌಂಟರ್ ಗಳನ್ನು ತೆಗೆದಿದ್ದಾರೆ. ಅದೇ ರೀತಿ ಮಲೆ ಮಾದೇಶ್ವರ ಬೆಟ್ಟದ ದೇವಾಲಯದ ಸಮೀಪ ಒಂದು ಚಪ್ಪಲಿ ಕೌಂಟರ್ ಗಳನ್ನು ತೆರೆಯಲಾಗಿದೆ. ಜಾತ್ರಾ ಮಹೋತ್ಸವ ಹಬ್ಬ ಹರಿದಿನಗಳು,ಅಮಾವಾಸ್ಯೆ ಪೂಜೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ಬರುವಂತಹ ಭಕ್ತಾದಿಗಳಿಗೆ ಕೇವಲ ಒಂದೇ ಒಂದು ಚಪ್ಪಲಿ ಕೌಂಟರ್ ಇರುವುದರಿಂದ ತೀವ್ರ ತೊಂದರೆ ಆಗುತ್ತಿದೆ ಈ ಹಿನ್ನೆಲೆ ದೇವಾಲಯದ ಆವರಣ ಹಾಗೂ ರಂಗಮಂದಿರದ ಮುಂಭಾಗ ಚಪ್ಪಲಿಗಳನ್ನು ಬಿಡುತ್ತಿರುವುದರಿಂದ ಭಕ್ತರಿಗೆ ಕಿರಿಕಿರಿ ಉಂಟಾಗುತ್ತಿದೆ ಆದ್ದರಿಂದ ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಹೆಚ್ಚು ಚಪ್ಪಲಿ ಕೌಂಟರ್ ತೆರೆದು ಅನುಕೂಲ ಕಲ್ಪಿಸಿ ಎಲ್ಲೆಂದರಲ್ಲಿ ಚಪ್ಪಾಲಿ ಬಿಡದಂತೆ ಕ್ರಮವಹಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.





