Mysore
22
overcast clouds

Social Media

ಶನಿವಾರ, 13 ಜೂನ್ 2026
Light
Dark

ಕೊಳ್ಳೆಗಾಲ : ಡಿಸಿ ನಡೆ ಕಾರ್ಯಕ್ರಮದಲ್ಲಿ 51 ಅರ್ಜಿ ಸ್ವೀಕಾರ

ಕೊಳ್ಳೇಗಾಲ: ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ೫೧ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಈ ೫೧ ಅರ್ಜಿಗಳ ಪೈಕಿ ಹೆಚ್ಚು ಖಾತೆ ಬದಲಾವಣೆಗೆ ಸಂಬಂಧಿಸಿದ್ದವುಗಳಾಗಿದ್ದವು. ಕೆಲವರು ೫ ವರ್ಷಗಳ ಕಾಲಕ್ಕೂ ಹೆಚ್ಚು ಸಮಯವಾದರೂ ನಮಗೆ ಖಾತೆ ಮಾಡಿಕೊಟ್ಟಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಅರ್ಜಿ ಸ್ವೀಕರಿಸಿದ ತಹಸಿಲ್ದಾರ್ ಮಂಜುಳರವರು ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕೈಗೊಳ್ಳುವುದಾಗಿ ತಿಳಿಸಿದರು.
ತಾ.ಪಂ. ಇಒ ಮಹೇಶ್, ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ, ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಸುಶೀಲಾ, ಸದಸ್ಯ ರಾಮಕೃಷ್ಣ, ಜಯರಾಜು, ಪ್ರಶಾಂತ್, ಸಿದ್ದಯ್ಯನಪುರ ಗ್ರಾ.ಪಂ. ಅಧ್ಯಕ್ಷ ಗುಣಶೇಖರ್, ಬಿಇಒ ಚಂದ್ರಪಾಟೀಲ್, ಗ್ರೇಡ್-೨ ತಹಸಿಲ್ದಾರ್ ಶಿವಕುಮಾರ್, ನಾಡಗೌಡ ಅನಿಲ್, ಶಿವಪ್ಪ ಇತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!