Mysore
29
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಕೊಡಗು: ಗೇಟ್‌ನಲ್ಲಿ ಸಿಕ್ಕಿಕೊಂಡ ತಲೆಯನ್ನು ಹೊರ ತೆಗೆಯಲು ಪರದಾಡಿದ ಕಾಡಾನೆ

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತಿತಿಮತಿಯ ಬಳಿಯ ಅರಣ್ಯ ಇಲಾಖೆಯ ಟಿಂಬರ್‌ ಯಾರ್ಡ್‌ನ ಗೇಟ್‌ನಲ್ಲಿ ಕಾಡಾನೆಯ ತಲೆ ಸಿಕ್ಕಿಕೊಂಡಿದ್ದು, ಅದನ್ನು ಹೊರ ತೆಗೆಯಲು ಪಡದಾಡಿದೆ.

ತಿತಿಮತಿಯ ಬಳಿಯ ಅರಣ್ಯ ಇಲಾಖೆಯಲ್ಲಿ ಇಂದು(ಜನವರಿ.18) ಟಿಂಬರ್ ಯಾರ್ಡ್‌ನ ಗೇಟ್‌ನಲ್ಲಿ ಕಾಡಾನೆ ತಲೆಯೂ ಸಿಕ್ಕಿಕೊಂಡಿದ್ದು, ಕೆಲಕಾಲ ಹೊರಬರಲು ಹರಸಾಹಸ ಮಾಡಿದೆ.

ಒಟ್ಟು 5 ಕಾಡಾನೆಗಳ ಹಿಂಡಿನಲ್ಲಿದ್ದ ಒಂದು ಕಾಡಾನೆಯ ತಲೆ ,ರೆಡಿಯೋ ಕಾಲರ್ ಅಳವಡಿಸಿದ್ದ ಯಾರ್ಡ್ ಗೇಟ್‌ನಲ್ಲಿ ಸಿಲುಕಿಕೊಂಡಿತ್ತು. ಆದರೆ ಆ ಕಾಡಾನೆ ಕೆಲಕ್ಷಣದಲ್ಲಿಯೇ ಚಾಣಕ್ಷತೆಯಿಂದ ತಲೆ ಹೊರತೆಗೆದು ಪರಾರಿಯಾಗಿದೆ. ಇನ್ನೂ ಕಾಡಾನೆ ತಲೆ ಸಿಲುಕಿಕೊಂಡಿದ್ದ ಸಂಗಾತಿಯ ನೆರವಿಗೆ ಧಾವಿಸಿದ್ದ ಮತ್ತೊಂದು ಕಾಡಾನೆಯೂ ಕ್ಯಾಮರದಲ್ಲಿ ಸೆರೆಯಾಗಿದೆ.

ಈ ಘಟನೆಯೂ ಮನೆಯಪಂಡ ಮಾಯಾ ರಾಮ್ ದಾಸ್ ಅವರ ಭದ್ಗಗೋಳ ಎಸ್ಟೇಟ್‌ನ ಮುಂಭಾಗ ಅರಣ್ಯ ಡಿಪೋದಲ್ಲಿ ನಡೆದಿದೆ. ಈ ವೇಳೆ ತಲೆ ಸಿಕ್ಕಿಕೊಂಡಿದ್ದ ಕಾಡಾನೆಯೊಂದಿಗೆ ಐದು ಕಾಡಾನೆಗಳಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!