HD ಕೋಟೆ : ಸಾಲ ಬಾಧೆಯಿಂದ ರೈತ ಸಾವು ಎಚ್ ಡಿ ಕೋಟೆ: ಸಾಲ ಬಾಧೆಯಿಂದಾಗಿ ರೈತರೊಬ್ಬರು ಸಾವಿಗೆ ಶರಣಾಗಿರುವ ಘಟನೆ ಹಂಪಾಪುರದಲ್ಲಿ ನಡೆದಿದೆ. ತಾಲ್ಲೂಕಿನ ದಗ್ಗಲುಂಡಿ ಗ್ರಾಮದ ರೈತ ಬಸವೇಶ್ (50) ಎಂಬುವವರೇ ಸಾವಿಗೀಡಾದವರು. ರೈತ ಬಸವೇಶ್ ತಮ್ಮ ಗ್ರಾಮದ ಸಮೀಪದಲ್ಲಿರುವ ನಾಲ್ಕು ಎಕರೆ ಜಮೀನಿನಲ್ಲಿ ಹತ್ತಿರಾಗಿ ಟೊಮೊಟೊ ಅವರೇ ಇನ್ನಿತರ ಬೆಳೆಗಳನ್ನು ಕಳೆದ ಬಾರಿ ಮತ್ತು ಈ ಬಾರಿಯೂ ಜಮೀನಿನಲ್ಲಿ ಬೆಳೆಯಲು ಸಮೀಪದ ಜಿನ್ನಳ್ಳಿ ಗ್ರಾಮದ ವಿಎಸ್ಎಸ್ಎನ್ ಬ್ಯಾಂಕಿನಲ್ಲಿ 2,70,000ಗಳನ್ನು ಮತ್ತು ಇನ್ನಿತರ ಖಾಸಗಿ ಅವರ ಬಳಿ 5 ಲಕ್ಷಗಳನ್ನು ಪಡೆದು ಬೆಳೆ ಬೆಳೆಯಲು ನೀಡಲಾಗಿತ್ತು ಕಳೆದ ಬಾರಿ ಬಾರಿ ಮಳೆಯಿಂದಾಗಿ ಬೆಳೆ ಕೈಗೆ ಬರಲಿಲ್ಲ ಈ ಬಾರಿ ಸಹ ಸಮರ್ಪಕವಾಗಿ ಬೆಳೆ ಬರೆದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಆತಂಕಗೊಂಡು ಕಳೆದ ಒಂದು ವಾರದಿಂದ ತೀವ್ರವಾಗಿ ಕಂಗಲಾಗಿದ್ದರು ಬಸವೇಶ್ ಶನಿವಾರ ರಾತ್ರಿ ಗ್ರಾಮದಲ್ಲಿರುವ ಮನೆಯಿಂದ ನಡೆದುಕೊಂಡು ಬಂದು ಹಂಪಾಪುರ ಪೆಟ್ರೋಲ್ ಬಂಕ್ ಸಮೀಪದ ಖಾಲಿ ಇರುವ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ ಇಂದು ವಿಚಾರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ವಿಚಾರ ತಿಳಿದು ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತರಲಾಯಿತು ತಹಸಿಲ್ದಾರ್ ರತ್ನಂಬಿಕ ಮೃತರ ಪತ್ನಿಯಾದ ವಸಂತ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿ ಸರಕಾರದಿಂದ ತಮಗೆ ಸಿಗಬೇಕಾಗಿದ್ದ ಪರಿಹಾರವನ್ನು ಕೊಡಿಸಿಕೊಡುತ್ತೇವೆ ವೃದ್ದಾಪಿವೇತನ ಸೇರಿದ ಹತ್ತಿರ ಸೌಲಭ್ಯಗಳನ್ನು ಕೊಡಲು ಎಲ್ಲ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು ಆನಂತರ ಮೃತರ ಅಂತ್ಯಕ್ರಿಯೆ ಗ್ರಾಮದಲ್ಲಿ ನೆರವೇರಿತು ಇದೇ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ನರಸಿಂಹಮೂರ್ತಿ ಅಧಿಕಾರಿ ರಾಜಕುಮಾರ್ ಮುಖಂಡರಾದ ಸಿಂಡೆನಹಳ್ಳಿ ಕೀರ್ತಿ ಕುಮಾರ್ ಸಿದ್ದರಾಜು ಮರಿ ದೇವಯ್ಯ ಬಸವಣ್ಣ ಮಹೇಶ್ ಸೇರಿದಂತೆ ಗ್ರಾಮಸ್ಥರು ಮುಖಂಡರು ರೈತರು ಅನೇಕರು ಉಪಸ್ಥಿತರಿದ್ದರು Tags: ಸಾಲ ಬಾಧೆಹೆಚ್ ಡಿ ಕೋಟೆ
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ June 14, 10:26 AM Byಆಂದೋಲನ ಡೆಸ್ಕ್