Mysore
19
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಮಾಹಿತಿ ಇಲ್ಲದೇ ಹೊಸಳ್ಳಿ ಬೆಟ್ಟದಲ್ಲಿ ಸುತ್ತಾಟ ಮಾಡಿದ್ದೇವೆ: ಕ್ಷಮೆ ಇರಲಿ ಎಂದ ಯುವಕರು

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ ಬೆಟ್ಟದಲ್ಲಿ ಸುತ್ತಾಟ ಮಾಡಿದ್ದು ನಿಜ. ಆದರೆ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಯುವಕರು ತಪ್ಪೊಪ್ಪಿಕೊಂಡಿದ್ದಾರೆ.

ಅಲ್ಲಿ ವಾಹನದಲ್ಲಿ ಹೋಗಬಾರದು ಅಥವಾ ಈ ಬಗ್ಗೆ ಯಾವುದಾದರೂ ನಾಮಫಲಕ ಇದ್ದಿದ್ದರೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸಹ ಯಾರು ಇಲ್ಲದ ಕಾರಣ ನಮಗೆ ತಿಳಿದಿರಲಿಲ್ಲ. ನಾಮಫಲಕವಾದ್ರೂ ನೋಡಿ ನಾವು ಅಲ್ಲಿಗೆ ವಾಹನ ತೆಗೆದುಕೊಂಡು ಹೋಗುತ್ತಿರಲಿಲ್ಲ. ನಮ್ಮ ಕಡೆಯಿಂದ ತಪ್ಪಾಗಿರುವುದು ನಿಜ. ತಪ್ಪು ಮಾಡಿರುವುದಕ್ಕೆ ಕ್ಷಮೆ ಕೋರುತ್ತೇವೆ ಎಂದು ಯುವಕರು ತಿಳಿಸಿದ್ದಾರೆ.

ನಾವು ಕೂಡ ಪ್ರಕೃತಿ ಪ್ರಿಯರು, ನಮಗೆ ಪ್ರಕೃತಿಯನ್ನು ಹಾಳು ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಹೀಗಾಗಿ ಈ ಘಟನೆ ಬಗ್ಗೆ ಯಾರೂ ಕೂಡ ಬೇರೆ ಏನನ್ನೂ ಭಾವಿಸಬೇಡಿ ಎಂದು ತಿಳಿಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ ಬೆಟ್ಟದಲ್ಲಿ ಸೌಂದರ್ಯ ಸವಿಯಲು ಹೋದ ಯುವಕರು, ಕಾರಿನಲ್ಲಿ ಹುಚ್ಚಾಟ ಆಡಿದ್ದರು. ಈ ಘಟನೆ ನಡೆಯುತ್ತಿದ್ದಂತೆ ಪ್ರಾಣಿಪ್ರಿಯರು ಹಾಗೂ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಯುವಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ.

 

 

Tags:
error: Content is protected !!