Mysore
24
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

“ಮುಂದಿಲ್ಲ ಮೋದಿ-2024 ಅಭಿಯಾನಕ್ಕೆ ಮಾಜಿ ಶಾಸಕ ಎಂಕೆ.ಸೋಮಶೇಖರ್ ಚಾಲನೆ !

ಮೈಸೂರು :  “ಮುಂದಿಲ್ಲ ಮೋದಿ 2024″ಎಂಬ ಧ್ಯೇಯದೊಂದಿಗೆ ರಾಮಸ್ವಾಮಿ ವೃತ್ತದಲ್ಲಿ  ಹಮ್ಮಿಕೊಳ್ಳಲಾಗಿದ್ದ ಅಭಿಯಾನಕ್ಕೆ  ಮಾಜಿ ಶಾಸಕರಾದ ಎಂಕೆ.ಸೋಮಶೇಖರ್ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ನೆನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಮೈಸೂರಿನಿಂದಲೇ ಮತ್ತೊಮ್ಮೆ ಮೋದಿ-2024 ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಮತ್ತೊಮ್ಮೆ ದೇಶವನ್ನು ಕೋಮು ಗಲಭೆಯ,ಆರ್ಥಿಕ ಸುಭದ್ರವಿಲ್ಲದ, ಬಡ ಮಧ್ಯಮ ಮತ್ತು ಎಲ್ಲಾ ವರ್ಗದ ವಿರೋಧಿ ನಾಯಕನನ್ನು ಬೆಂಬಲಿಸಲು ಅಭಿವೃದ್ಧಿ ಹೊರತಾಗಿ ರಾಮ ರಾಜಕೀಯ, ಧರ್ಮ ರಾಜಕೀಯ, ಭಾವನಾತ್ಮಕ ರಾಜಕೀಯದ ಮೂಲಕ ಆಡಳಿತಕ್ಕೇರುವ ಮತ್ತು ಏಕಾಧಿಪತಿ ಆಡಳಿತ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಇಂತಹ ವ್ಯಕ್ತಿ ಮತ್ತೊಮ್ಮೆ ದೇಶದ ಅಗ್ರಮಾನ್ಯ ಪದವಿಯಾದ ಪ್ರಧಾನಿ ಹುದ್ದೆಗೆ ಏರಬಾರದು,ಹಿಟ್ಲರ್ ಆಡಳಿತ ಇಲ್ಲಿಗೆ ಕೊನೆಯಾಗಲಿ ಎಂಬ ಗುರಿಯೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ದೇಶದ ಪ್ರಧಾನಿ ಸರ್ವಾಧಿಕಾರಿ ಹಿಟ್ಲರ್ ಮನಸ್ಥಿತಿಯನ್ನು ಹೊಂದಿರುವಂತವರು.ಕಳೆದ ಹತ್ತು ವರ್ಷಗಳಿಂದ ಒಂದು ಮೀಡಿಯಾದ ಜೊತೆ ಆಗಲಿ ಮಾಧ್ಯಮದ ಜೊತೆಯಾಗಲಿ ಅಥವಾ ಸಾರ್ವಜನಿಕ ಸಂವಾದದಲ್ಲಿ ಭಾಗವಹಿಸಿಲ್ಲ.
ಕೇವಲ ಏಕಮುಖ ಭಾಷಣದಿಂದಲೇ ಕಾಲ ಕಳೆಯುತ್ತಿದ್ದಾರೆ. ದೇಶದಲ್ಲಿ ಹಸಿವು ಬಡತನ ನಿರುದ್ಯೋಗ ತಾಂಡವಡುತ್ತಿದೆ.ಹಸಿವಿನ ಸೂಚ್ಯಂಕದಲ್ಲಿ ಬಾಂಗ್ಲಾದೇಶಕ್ಕಿಂತಲೂ ಕಡೆಯಾಗಿದೆ.
ಈ ಹಸಿವನ್ನು ತಾಳಲಾರದೆ ನಮ್ಮ ದೇಶದ ಬಡಜನ 20,000 ಕಾರ್ಮಿಕರು ಇಲ್ಲಿ ಹಸಿವಿನಿಂದ ಸಾಯುವ ಬದಲು ಇಸ್ರೇಲಿನ ಯುದ್ಧ ಭೂಮಿಯಲ್ಲಿ ಸತ್ತರೂ ಸಾಯೋಣ ಎಂದು ಕೆಲಸವನ್ನು ಹರಸಿ 20,000 ಜನ ಭಾರತದಿಂದ ಇಸ್ರೇಲಿಗೆ ಹೊರಟಿದ್ದಾರೆ.
ಇದನ್ನು ನೋಡಿದಾಗ ದೇಶದ ಪರಿಸ್ಥಿತಿ ಏನೆಂದು ಎಲ್ಲರಿಗೂ ಅರ್ಥವಾಗುತ್ತದೆ.ಇವರು ಮೋದಿ ಮೋದಿ ಎಂದು ಭ್ರಮೆಯನ್ನ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.ಆದರೆ ನೈಜ ಪರಿಸ್ಥಿತಿಯೇ ಬೇರೆಯಾಗಿದೆ.
ಚುನಾವಣೆ ಎಷ್ಟು ಬೇಗ ಬರುತ್ತದೆಯೋ ಮೋದಿಯವರನ್ನು ಅಧಿಕಾರದಿಂದ  ಕಿತ್ತೊಗೆಯಲು ಚುನಾವಣೆಗಾಗಿ ಜನ ತುದಿಗಾಲದಲ್ಲಿ ನಿಂತಿದ್ದಾರೆ.ಒಬ್ಬ ಪ್ರಧಾನಿಯಾದವರನ್ನ ಗೋಡೆಯಲ್ಲಿ ಬರೆದು ಜನರಿಗೆ ತೋರಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದು ಇದು ಬಿಜೆಪಿಗೆ ಬಂದಿರುವ ದುಸ್ಥಿತಿಯನ್ನು ಸೂಚಿಸುತ್ತದೆ.
ಮೋದಿ ಮತ್ತೊಮ್ಮೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಹೊರತು ಈ ದೇಶದ ಜನರು ಹೇಳುತ್ತಿಲ್ಲ. ಆಗಾಗೀ ನಾವು ಜನರ ಭಾವನೆಯಾದ “ಮುಂದಿಲ್ಲ ಮೋದಿ 2024″ಅಭಿಯಾನವನ್ನೂ ಮೈಸೂರಿನಿಂದಲೇ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ನಂತರ ಕೆಪಿಸಿಸಿ ವಕ್ತಾರರಾದ ಹೆಚ್.ಎ ವೆಂಕಟೇಶ್ ರವರು ಮಾತನಾಡಿ ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಆಟ ನಡೆಯದು.ಸನ್ಮಾನ್ಯ ಯಡಿಯೂರಪ್ಪನವರು ಈ ನಾಡಿನ ಮುಖ್ಯಮಂತ್ರಿಗಳಾಗಿದ್ದವರು ಅಂಥವರು ಇಂತಹ ಅಭಿಯಾನ ಮಾಡುತ್ತಿರುವುದು ನಿಜಕ್ಕೂ ಅತ್ಯಂತ  ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.
ಈ ದೇಶದ ಈ ರಾಜ್ಯದ ಜನರ ಮನಸ್ಸಿನಲ್ಲಿ ಮೋದಿಯವರು ಅಳಿಸಿ ಹೋಗಿದ್ದಾರೆ.ಹಾಗಾಗಿ ಬಿಜೆಪಿಯವರು ಮೋದಿಯವರ ಹೆಸರನ್ನು ಗೋಡೆ ಮೇಲೆ ಬರೆಯುವ ಮೂಲಕ ಮೋದಿಯವರನ್ನು ನೆನಪಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದು ಮೋದಿ ಅವರಿಗೆ ಬಂದಿರುವ ದು‌ಸ್ಥಿತಿಯನ್ನು ಸೂಚಿಸುತ್ತದೆ ಎಂದು ವ್ಯಂಗ್ಯವಾಡಿದರು.‌
ಈ ವೇಳೆ ಕೆಪಿಸಿಸಿ ವಕ್ತಾರರಾದ ಎಚ್.ಎ.ವೆಂಕಟೇಶ್,ಬ್ಲಾಕ್ ಅಧ್ಯಕ್ಷರುಗಳಾದ ಜಿ.ಸೋಮಶೇಖರ್,ಶ್ರೀಧರ್,ಮಾಜಿ ಮಹಾಪೌರರುಗಳಾದ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಸದಸ್ಯರಾದ ಜೆ.ಗೋಪಿ,ಜೋಗಿ ಮಹೇಶ್,ಮಂಜು, ವಿಜಯ್ ಕುಮಾರ್, ರವಿಶಂಕರ್, ಪರಶಿವಮೂರ್ತಿ, ಗುಣಶೇಖರ್, ವಿಶ್ವ ನಾಥ್, ರಮೇಶ್ ರಾಮಪ್ಪ,ಮಹ್ಮದ್ ಫಾರೂಖ್,ಮಧುರಾಜ್,ಇಂದಿರಾ,ಎನ್ ಎಸ್ ಯು ಐ ಅಧ್ಯಕ್ಷ ಮನೋಜ್,ವಿನಯ್, ಕುಮಾರ್, ಲೋಕೇಶ್ ಕುಮಾರ್, ನಾಗರತ್ನ ಮಂಜುನಾಥ್, ಉತ್ತನಹಳ್ಳಿ ಶಿವಣ್ಣ ಮತ್ತಿತರು ಉಪಸ್ಥಿತರಿದ್ದರು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ