Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಡಿಎಫ್‌ಒ ಕಚೇರಿಗೆ ರೈತ ಸಂಘದಿಂದ ದಿಗ್ಬಂಧನ

ಕೊಳ್ಳೇಗಾಲ: ರೈತರ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಡಿಎಫ್‌ಒ ಕಚೇರಿಗೆ ದಿಗ್ಬಂಧನ ಹಾಕಿ ಸಿಬ್ಬಂದಿಗಳನ್ನು ಹೊರ ಹೋಗದಂತೆ ತಡೆಯೊಡ್ಡಲಾಯಿತು.
ಈ ವಿಚಾರ ತಿಳಿದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಸ್ಥಳಕ್ಕೆ ಆಗಮಿಸಿ, ಮುಖ್ಯಮಂತ್ರಿಗಳು ಡಿ.೧೨ರಂದು ಮ.ಬೆಟ್ಟಕ್ಕೆ ಬರುತ್ತಿರುವುದರಿಂದ ಅಲ್ಲಿ ರೈತ ಸಂಘದ ಮುಖಂಡರಿಗೆ ಬೇಡಿಕೆಗಳ ಬಗ್ಗೆ ಚರ್ಚಿಸಲು ಕಾಲಾವಕಾಶ ಮಾಡಿಕೊಡುವುದಾಗಿ ತಿಳಿಸಿದರು. ನಂತರ ರೈತರು ದಿಗ್ಬಂಧನ ತೆರವುಗೊಳಿಸಿದರು. ಬಳಿಕ ಕಚೇರಿಯ ಸಿಬ್ಬಂದಿ ಹೊರಹೋಗಲು ಅವಕಾಶ ಕಲ್ಪಿಸಲಾಯಿತು.
ಆದರೆ ಹೋರಾಟವನ್ನು ಮುಂದುವರಿಸುವುದಾಗಿ ಬಡಗಲಪುರ ನಾಗೇಂದ್ರ ಅವರು ತಿಳಿಸಿದ್ದು, ಮುಖ್ಯಮಂತ್ರಿಯ ಭೇಟಿಯ ನಂತರ ಚಳವಳಿ ಮುಂದುವರಿಸಬೇಕೋ ಅಥವಾ ಮುಕ್ತಾಯಗೊಳಿಸಬೇಕೋ ಎಂಬುದನ್ನು ಆನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಹನೂರು ಮುಖಂಡ ಮುಜಾಮಿಲ್ ಪಾಷ, ತಾಲ್ಲೂಕು ರೈತ ಮುಖಂಡರು ಶೈಲೇಂದ್ರ, ಮಧುವನಹಳ್ಳಿ ಬಸವರಾಜಪ್ಪ, ಭಾಸ್ಕರ, ಅರೇಪಾಳ್ಯ ನಾಗರಾಜು,ಜೋಯಲ್ ನಿವಾಸ ಇತರರು ಹಾಜರಿದ್ದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!