Mysore
19
scattered clouds

Social Media

ಗುರುವಾರ, 16 ಜನವರಿ 2025
Light
Dark

ದಸರಾ ಸಡಗರ ಸರಣಿ – 1 : ಪ್ರವಾಸೋದ್ಯಮಕ್ಕೆ ದಸರಾ ಹಬ್ಬವೇ ಟಾನಿಕ್!

ಪ್ರವಾಸಿಗರ ಸ್ವರ್ಗ, ದಕ್ಷಿಣ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರವಾಣ ಕಡಿಮೆಯಾಗಿದ್ದು, ಪ್ರವಾಸೋದ್ಯಮ ಚೇತರಿಸಿ ಕೊಳ್ಳುತ್ತಿದೆ. ಏಳು-ಬೀಳುಗಳ ನಡುವೆ ಪ್ರವಾಸೋದ್ಯಮ ಅವಲಂಭಿತರು ಲಾಭದತ್ತ ಮುಖ ವಾಡಿದ್ದಾರೆ. ಪ್ರವಾಸೋದ್ಯಮ ಚೇತರಿಕೆ ಸಂಬಂಧ ಇಂದಿನಿಂದ ‘ಆಂದೋಲನ’ ದಿನಪತ್ರಿಕೆ ಸರಣಿ ವಿಶೇಷ ವರದಿಗಳನ್ನು ಪ್ರಕಟಿಸಲಿದೆ.

ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ನಿರ್ಧಾರ; ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ

ನವೀನ್ ಡಿಸೋಜ

ಮಡಿಕೇರಿ: ಪ್ರಕೃತಿ ವಿಕೋಪ, ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿದ್ದ ಕೊಡಗು ಪ್ರವಾಸೋದ್ಯಮ ಚೇತರಿಕೆಯಲ್ಲಿದೆ. ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆದಿದ್ದು, ಚೇತರಿಕೆುಂಲ್ಲಿರುವ ಪ್ರವಾಸೋದ್ಯಮಕ್ಕೆ ಮತ್ತಷ್ಟು ಟಾನಿಕ್ ಒದಗಿಸಲಿದೆ.
೨೦೧೮ರಿಂದ ಪ್ರಕೃತಿ ವಿಕೋಪ ಹಾಗೂ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಗಳಿಂದ ಕೊಡಗಿನ ಪ್ರವಾಸೋದ್ಯಮ ನಷ್ಟ ಅನುಭ ವಿಸುವಂತಾಗಿತ್ತು. ಆದರೆ, ಈ ಬಾರಿ ಬೇಸಿಗೆ ರಜೆಯಲ್ಲಿಯೇ  ಪ್ರವಾಸೋದ್ಯಮ ಚೇತರಿಕೆ ಕಂಡಿತ್ತು. ಮಳೆಯಿಂದ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಲು ಕೊಂಚ ಹಿಂದೇಟು ಹಾಕಿದರೂ ಪ್ರವಾಸೋದ್ಯಮ ಲಾಭದಲ್ಲಿಯೇ ಮುಂದುವರಿದಿತ್ತು. ಈ ನಡುವೆ ಈ ಬಾರಿ ಅದ್ಧೂರಿ ದಸ ರಾ ಆಚರಣೆಗೆ ಸರ್ಕಾರ ಸಿದ್ಧತೆ ನಡೆಸಿರುವುದು ಪ್ರವಾಸೋದ್ಯಮ ಅವಲಂಭಿತರಲ್ಲಿ ಭರವಸೆ ಮೂಡಿಸಿದೆ.

ಮಡಿಕೇರಿ ದಸರಾಕ್ಕೆ ತನ್ನದೇ ಆದ ಇತಿಹಾಸವಿದೆ. ದಸರಾವನ್ನು ಮೈಸೂರು ಸ್ವಾಗತಿಸಿದರೆ ಮಡಿಕೇರಿ ಬೀಳ್ಕೊಡುತ್ತದೆ ಎನ್ನಲಾಗುತ್ತದೆ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂ ಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ  ರಾತ್ರಿ ನಡೆುುಂ ವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ. ಹೀಗಾಗಿ ಮೈಸೂರು ದಸರಾ ನೋಡಿಕೊಂಡು ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ.

ಈ ಬಾರಿ ಮಡಿಕೇರಿ ದಸರಾಕ್ಕೆ ೧ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ವಾಡಿದೆ. ಹೀಗಾಗಿ ವಿಜೃಂಭಣೆಯಿಂದ ದಸರಾ ಆಚರಿಸಲು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳು ನಿರ್ಧರಿಸಿವೆ. ಅದ್ಧೂರಿ ದಸರಾ ಆಚರಣೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದೆ.
ಚಲನವಲನಗಳನ್ನು ಒಳಗೊಂಡ ಕಲಾಕೃತಿಗಳ ಕಥಾ ಹಂದರವನ್ನು ಮಂಟಪಗಳಲ್ಲಿ ಅಳವಡಿಸಿ ನೋಡುಗರನ್ನು ಸೆಳೆಯಲು ದಶ ಮಂಟಪಗಳು ನಿರ್ಧರಿಸಿವೆ. ವಿಜಯದಶಮಿ ದಿನ ರಾತ್ರಿ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಮಂಟಪಗಳ ಶೋಭಾ ಯಾತ್ರೆ ವೀಕ್ಷಿಸಲು ಜಿಲ್ಲೆಯ ಜನರೇ ಸಾವಿರಾರು ಸಂಖ್ಯೆಯಲ್ಲಿ ಜವಾಯಿಸುತ್ತಾರೆ. ಇದರೊಂದಿಗೆ ಪ್ರವಾಸಿಗರು ಆಗಮಿಸಲಿದ್ದು, ಪ್ರವಾಸಿಗರನ್ನು ಅವಲಂಭಿಸಿರುವ ಉದ್ಯಮಗಳಿಗೆ ಲಾಭವಾಗುವ ನಿರೀಕ್ಷೆ ಹೊಂದಲಾಗಿದೆ.
ಹೊಟೇಲ್, ಹೋಂಸ್ಟೆ, ರೆಸಾರ್ಟ್, ಸ್ಪ್ತ್ಯೈಸಸ್ ಮಳಿಗೆಗಳು ಸೇರಿದಂತೆ ಕೊಡಗಿನ ಆಟೋ, ಟ್ಯಾಕ್ಸಿ ಮತ್ತಿತರ ಉದ್ಯಮಗಳಿಗೂ ಪ್ರವಾಸಿಗರ ಆಗಮನದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿಲಿದೆ.


ಎಂ.ಪಿ.ಅಪ್ಪಚ್ಚು ರಂಜನ್, ಶಾಸಕರು, ಮಡಿಕೇರಿ ಕ್ಷೇತ್ರ
ಎಂ.ಪಿ.ಅಪ್ಪಚ್ಚು ರಂಜನ್, ಶಾಸಕರು, ಮಡಿಕೇರಿ ಕ್ಷೇತ್ರ

 

 

 

 

 

ಕಳೆದ ಬಾರಿ ದಸರಾ ಉತ್ಸವಕ್ಕೆ ೧ ಕೋಟಿ ರೂ. ಅನುದಾನ ಬಿಡುಗಡೆಾಂಗಿತ್ತು. ಅದರಲ್ಲಿ ೨೫ ಲಕ್ಷ ರೂ. ದಸರಾ ಉತ್ಸವಕ್ಕೆ ಬಳಸಿ ಉಳಿದ ೭೫ ಲಕ್ಷ ರೂ.ಗಳನ್ನು ಅಭಿವೃದ್ಧಿ ಕಾಂರ್ುಕ್ಕೆ ಬಳಸಲಾಗಿತ್ತು. ಈ ಬಾರಿ ೧ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಎಲ್ಲ ಅನುದಾನವನ್ನು ದಸರಾಕ್ಕೆ ಬಳಸಲಾಗುತ್ತದೆ. ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು


ಮನು ಮಂಜುನಾಥ್, ಅಧ್ಯಕ್ಷರು, ದಶಮಂಟಪ ಸಮಿತಿ.
ಮನು ಮಂಜುನಾಥ್, ಅಧ್ಯಕ್ಷರು, ದಶಮಂಟಪ ಸಮಿತಿ.

 

 

 

 

 

 

ಈ ಬಾರಿ ದಸರಾವನ್ನು ಅದ್ಧೂರಿಾಂಗಿ ಆಚರಿಸುವ ನಿಟ್ಟಿನಲ್ಲಿ ದಶಮಂಟಪಗಳು ಸಿದ್ಧತೆ ಕೈಗೊಂಡಿವೆ. ಮಂಟಪಗಳ ತೀರ್ಪುಗಾರಿಕೆಗೆ ಉತ್ತಮ ತೀರ್ಪುಗಾರರನ್ನೇ ನೇಮಿಸಿ ಪಾರದರ್ಶಕವಾಗಿ ತೀರ್ಪುಗಾರಿಕೆ ನಡೆಸಲಾಗುತ್ತದೆ. ೧ ಕೋಟಿ ರೂ. ಅನುದಾನದಲ್ಲಿ ಕರಗ ಹಾಗೂ ಮಂಟಪಗಳಿಗೆ ಸೇರಿಸಿ ೬೦ ಲಕ್ಷೃ ರೂ. ಅನುದಾನಕ್ಕೆ ದಸರಾ ಸಮಿತಿಗೆ ಮನವಿ ವಾಡಲು ಚಿಂತನೆ ನಡೆಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ