ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವ ವಲಯದಲ್ಲಿ ಐದು ಹುಲಿಗಳ ಅಸಹಜ ಸಾವು ತನಿಖೆಗೆ ಅರಣ್ಯ ಇಲಾಖೆ 6 ಜನರ ತಂಡ ರಚನೆ ಮಾಡಿದೆ.
ಹುಲಿಗಳ ಮೃತದೇಹ ಪರೀಕ್ಷಿಸಿದಾಗ ಮೇಲ್ನೋಟಕ್ಕೆ ವಿಷಪ್ರಾಶನದಿಂದ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ಪಿಸಿಸಿಎಫ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಗುರುವಾರ ಸಂಜೆ ತಾಯಿ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಉಳಿದ ಹುಲಿಗಳ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗುತ್ತದೆ.
6 ಮಂದಿ ಅಧಿಕಾರಿಗಳ ತಂಡ ರಚನೆ
ಬಿ.ಪಿ ರವಿ, ಪಿಸಿಸಿಎಫ್ – ಅಧ್ಯಕ್ಷರು
ಶ್ರೀನಿವಾಸುಲು – ಎಪಿಸಿಸಿಎಫ್
ಹೀರಾಲಾಲ್ ಟಿ – ಸಿಸಿಫ್
ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿಯ ಒಬ್ಬ ಸದಸ್ಯರು
ಪಶುವೈದ್ಯಾಧಿಕಾರಿ
ಡಾ.ಸಂಜಯ್ ಗುಬ್ಬಿ – ತಜ್ಞರು
ಈ ತನಿಖಾ ತಂಡ ಘಟನಾ ಸ್ಥಳಕ್ಕೆ ನಾಳೆ ಭೇಟಿ ನೀಡಲಿದ್ದು, ಮೂರು ದಿನಗಳ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.





