ಚಾಮರಾಜನಗರ :ನಗರದ ವಿವಿಧ ಕಡೆಗಳಲ್ಲಿ ಸುನೀಲ್ ಬೋಸ್ ವಿರುದ್ಧ ಭಿತ್ತಿಪತ್ರಗಳು ಬುಧವಾರ ಬೆಳಿಗ್ಗೆ ಕಂಡು ಬಂದವು.
ಬೋಸ್ ಅವರ ಫೋಟೊ ಹಾಕಿದ್ದ ಭಿತ್ತಿ ಪತ್ರದಲ್ಲಿ ‘ಮರಳು ಮಾಫಿಯಾದ ಅನಭಿಷಿಕ್ತ ದೊರೆ ಗೋ ಬ್ಯಾಕ್’ ಎಂದು ಬರೆಯಲಾಗಿತ್ತು. ವಿಷಯಗೊತ್ತಾಗುತ್ತಿದ್ದಂತೆಯೇ ಪೊಲೀಸರು ಭಿತ್ತಿಪತ್ರಗಳನ್ನು ತೆರವುಗೊಳಿಸಿದರು.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುನೀಲ್ ಬೋಸ್, ‘ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ನಾನು ನಿರ್ದೋಷಿ ಎಂದು ಕೋರ್ಟ್ ಹೇಳಿದೆ. ಇದು ಬಿಜೆಪಿಯರ ಕೃತ್ಯ ಇರಬಹುದು. ಬಿಜೆಪಿಯವರಿಗೆ ಬೇರೆ ಯಾವುದೇ ಕೆಲಸಗಳಿಲ್ಲ. ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ’ ಎಂದರು.
ಒಂದು ವೇಳೆ ಆರೋಪ ಸಾಭೀತು ಮಾಡಿದರೆ ನಾನು ನಾಮ ಪತ್ರ ಸಲ್ಲಿಸುವುದಿಲ್ಲ ಎಂದು ತಿಳಿಸಿದರು.





