Mysore
29
overcast clouds

Social Media

ಗುರುವಾರ, 30 ಜುಲೈ 2026
Light
Dark

ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಪೊಲೀಸ್‌ ಪೇದೆ

ಮಡಿಕೇರಿ: ಪೊಲೀಸ್ ಪೇದೆಯೊಬ್ಬ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಡಿಕೇರಿ ನಗರದಲ್ಲಿ ಗುರುವಾರ ನಡೆದಿದೆ.
ಸೋಮಶೇಖರ್ ಸಜ್ಜನ್ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮಾಂತರ ಠಾಣಾ ಸಿಬ್ಬಂದಿ. ಮಡಿಕೇರಿ ತಾಲೂಕಿನ ವ್ಯಕ್ತಿಯೊಬ್ಬರು ವಾಹನದಲ್ಲಿ ಮಣ್ಣು ಸಾಗಿಸುತ್ತಿದ್ದನ್ನು ನೆಪವಾಗಿಸಿಕೊಂಡಿದ್ದ ಪೊಲೀಸ್ ಸಿಬ್ಬಂದಿ, ಹಣಕ್ಕಾಗಿ ಬೆದರಿಕೆ ಹಾಕಿದ್ದರು. ಮರಳು ಸಾಗಟದ ಆರೋಪ ಹೊರಿಸಿ 30 ಸಾವಿರ ಬೇಡಿಕೆ ಇಟ್ಟಿದ್ದರು. ಹಣ ಹೊಂದಿಸಲಾಗದ ವ್ಯಕ್ತಿ ತನ್ನ ಬಳಿಯಿದ್ದ 4 ಸಾವಿರ  ಹಾಗು ಸಾಲವಾಗಿ 3 ಸಾವಿರ ಹಣ ನೀಡಿದ್ದರು. ಉಳಿದ 3 ಸಾವಿರ ಹಣವನ್ನು ಗುರುವಾರ ಬೀಡ ಅಂಗಡಿಯಲ್ಲಿ ನೀಡುವಂತೆ ಪೊಲೀಸ್ ಸಿಬ್ಬಂದಿ ಸೂಚಿಸಿದರು.
ಪೊಲೀಸ್ ಸಿಬ್ಬಂದಿಯ  ವರ್ತನೆಯಿಂದ ಬೇಸತ್ತಿದ್ದ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ನಂತರ ಗುರುವಾರ ಬೀಡ ಅಂಗಡಿಯಲ್ಲಿ ಹಣ ಪಡೆಯುವ ಸಂದರ್ಭ ಲೋಕಾಯುಕ್ತ ಅಧಿಕಾರಿಗಳಿಗೆ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬೀಡ ಅಂಗಡಿಯ ಹಮೀದ್‌ನ ವೀಚಾರಣೆ ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಮಡಿಕೇರಿ ಇನ್ಸ್‌ಪೆಕ್ಟರ್ ಲೋಕೇಶ್, ಮೈಸೂರು ಇನ್ಸ್‌ಪೆಕ್ಟರ್ ಜಯರತ್ನ, ಹೆಡ್ ಕಾನ್ಸ್‌ಸ್ಟೇಬಲ್‌ ಮಂಜುನಾಥ್ ಸಿಬ್ಬಂದಿಗಳಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!