Mysore
21
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಜನಾಕರ್ಷಣೆಯ ಸುತ್ತೂರು ಜಾತ್ರೆಗೆ ಸಾಗಿದ ಭರದ ಸಿದ್ಧತೆ

ಎರಡು ವರ್ಷಗಳ ನಂತರ ಅದ್ಧೂರಿ ಜಾತ್ರೆ; ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ

ನಂಜನಗೂಡು: ರಾಜ್ಯದ ಅತ್ಯಂತ ಜನಾಕರ್ಷಣೆಯ, ಅಕ್ಷರ ದಾಸೋಹ, ಜ್ಞಾನ ದಾಸೋಹದ ಜಾತ್ರೆ ಎಂದೇ ಬಿಂಬಿತವಾಗಿರುವ ಸುತ್ತೂರಿನ ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಸುತ್ತೂರಿನ ಅಂಗಳದಲ್ಲಿ ಈಗ ಭಾರೀ ಸಿದ್ಧತೆ ಆರಂಭವಾಗಿದೆ.
ಜ. 18ರ ಬುಧವಾರದಿಂದ ಜನವರಿ 23 ರವರೆಗೆ ನಡೆಯುವ ಈ ಜಾತ್ರೆಗೆ ಪ್ರತಿ ದಿನ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದ್ದು ಅವರಿಗೆ ಸಕಲ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಐದಾರು ಲಕ್ಷ ಜನ ಭಾಗವಹಿಸುವ ಈ ಜಾತ್ರೆಯಲ್ಲಿ ಜನರ ಸೇವೆಗೆ ಟೊಂಕ ಕಟ್ಟಿ ನಿಲ್ಲುವ ಸ್ವಯಂಸೇವಕರ ವಸತಿಗಾಗಿ ಅತ್ಯಾಧುನಿಕ, ತಾತ್ಕಾಲಿಕ ವಸತಿ ಗೃಹಗಳ ನಿರ್ಮಾಣವೀಗ ಸದ್ದಿಲ್ಲದೆ ಸುತ್ತೂರಿನ ಕಪಿಲಾ ತೀರದಲ್ಲಿ ಸದ್ದಿಲ್ಲದೆ ಆರಂಭವಾಗಿದೆ.

ಹಸಿರಿನ ಮರಗಳ ನೆರಳಲ್ಲಿ ಸಾಮೂಹಿಕ ದಾಸೋಹದ ವ್ಯವಸ್ಥೆಗಾಗಿ ಚಪ್ಪರದ ನಿರ್ಮಾಣ ಹಾಗೂ ಕಾಲ ಕಾಲಕ್ಕೆ ಸರಿಯಾಗಿ ಅಸಂಖ್ಯಾತ ಜನರ ಉದರ ತುಂಬಲು ವಿವಿಧ ಭಕ್ಷ್ಯ ಭೋಜನಗಳ ತಯಾರಿಕೆಗಾಗಿ ಒಲೆಗಳ ನಿರ್ಮಾಣವೂ ಭರದಿಂದ ಸಾಗುತ್ತಿದೆ. ಒಟ್ಟಾರೆ ಎರಡು ವರ್ಷಗಳ ನಂತರ ಅದ್ಧೂರಿಯಾಗಿ ನಡೆಯುವ ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರೋತ್ಸವದ ಸಿದ್ಧತೆ ಭರದಿಂದ ನಡೆಯುತ್ತಿದೆ.

ಸಿರಿಧಾನ್ಯಗಳಿಗೆ ಒತ್ತು

ಈ ಬಾರಿಯ ಜಾತ್ರೆಯ ಕೃಷಿ ಮೇಳದಲ್ಲಿ ಸಿರಿಧಾನ್ಯಗಳು, ಅದರ ತಿಂಡಿ ತಿನುಸುಗಳ ತಯಾರಿಕೆ ಹಾಗೂ ಅದರ ಬಳಕೆಗೆ ಮತ್ತು ಅದರಿಂದಾಗುವ ಉಪಯೋಗಗಳ ಅರಿವು ಮೂಡಿಸಲೂ ಮಠ ಸಜ್ಜಾಗಿದ್ದು, ಕೃಷಿ ಮೇಳವನ್ನು ಸಿರಿಧಾನ್ಯದ ಮೇಳವಾಗಿಸಬಹುದಾದಾದ ಕಾರ್ಯವನ್ನೂ ಇಲ್ಲಿ ಕಾಣಬಹುದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!