ಮೈಸೂರು: ರಸ್ತೆಗೆ ಪೆಯಿಂಟ್ ಮಾಡುವ ಲಾರಿಯಲ್ಲಿನ ಸಿಲಿಂಡರ್ ಸ್ಪೋಟಿಸಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಭಾನುವಾರ ನಡೆದಿದೆ. ಆದರೆ, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಮೈಸೂರಿನ ಶಾರದಾದೇವಿನಗರದ ಆನಂದನಗರ ಡಿ ಬ್ಲಾಕ್ ಬಳಿ ಯ ಆನಂದನಗರ ಡಿ ಬ್ಲಾಕ್ ನ ರಸ್ತೆಯಲ್ಲಿ ನಿಂತಿದ್ದ ರಸ್ತೆಗೆ ಪೇಯಿಂಟ್ ಮಾಡುವ ಲಾರಿಯಲ್ಲಿ ಇದ್ದ ಸಿಲಿಂಡರ್ ಸಿಡಿದು ಬೆಂಕಿ ಹತ್ತಿಕೊಂಡು ಉರಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಬೆಂಕಿಯನ್ನು ಆರಿಸಿಕೊಂಡು ಲಾರಿಯವರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ ಎನ್ನಲಾಗಿದೆ.





