Mysore
25
few clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಪ್ರಧಾನಿ ವಿರುದ್ಧದ ನಿಂದನೆ ದೇಶದ್ರೋಹವಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪ್ರಧಾನಿ ವಿರುದ್ಧದ ನಿಂದನೆ ಅವಹೇಳನಕಾರಿ ಅಥವಾ ಬೇಜವಾಬ್ದಾರಿ ಹೇಳಿಕೆ ಎಂದು ಪರಿಗಣಿಸಬಹುದೇ ಹೊರತು ದೇಶದ್ರೋಹ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಹೇಮಂತ್ ಚಂದ್ರಚೂಡ್, ಬೀದರ್ ನ್ಯೂ ಪೊಲೀಸರು ಶಾಲಾ ಆಡಳಿತ ಮಂಡಳಿ ವಿರುದ್ಧ ದಾಖಲಿಸಿದ ಪ್ರಕರಣವನ್ನು ರದ್ದುಗೊಳಿಸಿದ್ದಾರೆ.

ಬೀದರ್ ನ ಶಹೀನ್ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಅಲ್ಲಾವುದ್ದೀನ್ ಅಬ್ದುಲ್ ಖಾಲಿಕ್, ಮೊಹಮದ್ ಬಿಲಾಲ್ ಇನಾಂದರ್ ಮೊಹಮದ್ ಮೆಹತಾಬ್ ವಿರುದ್ಧ ಪೊಲೀಸರು ದೇಶದ್ರೋಹ ಆರೋಪ ಹೊರಿಸಿ ಎಫ್ ಐಆರ್ ದಾಖಲಿಸಿದ್ದರು.

ಪ್ರಕರಣದಲ್ಲಿ ಸೆಕ್ಷನ್ 153 (ಎ) ಮತ್ತು ಇಂಡಿಯನ್ ಪಿನಾಲ್ ಕೋಡ್ (ಐಪಿಎಸ್) ಆರೋಪಗಳು ಈ ಪ್ರಕರಣದಲ್ಲಿ ಕಂಡು ಬರುತ್ತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಪ್ರಧಾನಿಯನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳಿರುವುದು ಬೇಜಾಬ್ದಾರಿ ಮತ್ತು ಅವಹೇಳನಕಾರಿಯಾಗಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಹಾಗೂ ಸರಕಾರದಲ್ಲಿರು ವ್ಯಕ್ತಿಯನ್ನು ಟೀಕಿಸುವುದು ಸಹಜ. ಆದರೆ ಇದಕ್ಕಾಗಿ ಮುಸ್ಲಿಮರು ದೇಶಬಿಟ್ಟು ಹೋಗಿ ಎಂದು ಹೇಳುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿಯನ್ನು ನಿಂದಿಸಿದ ನಾಟಕ ಕೂಡ ಶಾಲೆಯ ಆವರಣದಲ್ಲಿ ನಡೆದಿದೆ ಹೊರತು ಮಕ್ಕಳು ಹೇಳುವ ಘೋಷಣೆಗಳು ಯಾವುದೇ ಪ್ರಚೋದನಕಾರಿಯಲ್ಲ. ಇದರಿಂದ ಕೋಮುಗಲಭೆ ಸಂಭವಿಸುತ್ತದೆ ಎಂದು ಬಿಂಬಿಸುವುದು ಕ್ರೌರ್ಯವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!