Mysore
22
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ವಿದ್ಯುತ್ ತಂತಿ ತುಳಿದು‌ ಅಪ್ಪ, ಮಗ ಸೇರಿ ಮೂವರ ಸಾವು

ತಿ. ನರಸೀಪುರದಲ್ಲಿ ದಾರುಣ ಘಟನೆಯಿಂದ ಅನಾಥವಾಯಿತು ಕುಟುಂಬ

ತಿ. ನರಸೀಪುರ: ತಾಲೂಕಿನ ನಿಲ್ಲಸೋಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಂದೆ ಮಗ ಸೇರಿ ಮೂವರು ರೈತರು ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ.

ರಾಜೇಗೌಡ ಅಲಿಯಾಸ್ ರಾಚಯ್ಯ (60), ಮಗ ಹರೀಶ (30), ಮಹದೇವಸ್ವಾಮಿ( 40) ಮೃತಪಟ್ಟವರು. ರಾಜೇಗೌಡರ ಜಮೀನಿನಲ್ಲಿ ಕ್ರಿಮಿನಾಶಕ ಹೊಡೆಯಲು ಹೋದಾಗ ಈ ಘಟನೆ ನಡೆದಿದೆ. ಬೆಳಗ್ಗೆ 7.30ಕ್ಕೆ ಮೂವರು ಹೊಲಕ್ಕೆ ಔಷಧ ಹೊಡೆಯಲು ಹೋಗಿದ್ದರು. ಕೆಳಭಾಗದಿಂದ ಔಷಧ ಹೊಡೆದುಕೊಂಡು ಗದ್ದೆಯ ಮೇಲ್ಭಾಗಕ್ಕೆ ಹೋದಾಗ ರಾಚಯ್ಯ ಅವರು ಪಾತಿ ಮೇಲೆ ತುಂಡಾಗಿ ಬಿದ್ದ ತಂತಿಯನ್ನು ತುಳಿದಿದ್ದರು. ಅವರು ಕಿರುಚಿಕೊಂಡಾಗ ಸಹಾಯಕ್ಕೆ ಧಾವಿಸಿದ ಮಗ ಹರೀಶ ಅವರೂ ವಿದ್ಯುತ್ ತಗುಲಿ ಮೃತಪಟ್ಟರು. ಇದನ್ನು ಗಮನಿಸದೇ  ಸಹಾಯಕ್ಕೆ ಹೋದ ಮಹದೇವಸ್ವಾಮಿ ಅವರೂ ಸ್ಥಳದಲ್ಲೇ ಮೃತಪಟ್ಟರು. ಹರೀಶ ಅವರು ರಾಚಯ್ಯ (60) ಅವರ ಒಬ್ಬನೇ ಮಗನಾಗಿದ್ದು ಆಧಾರ ಸ್ತಂಭಗಳನ್ನು ಕಳೆದುಕೊಂಡು ಕುಟುಂಬ ಅನಾಥವಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಶಾಸಕ ಅಶ್ವಿನ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಚೆಸ್ಕಾಂ ಅಧಿಕಾರಿಗಳು ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಉಸ್ತುವಾರಿ ಸಚಿವರ ಜತೆ ಮಾತನಾಡಿ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!