Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಭಾವನ ಕೊಲೆ : ಮನೆಗೆ ಬೆಂಕಿ

ರಾಮನಗರ : ತಾಲ್ಲೂಕಿನ ಕೆ.ಜಿ. ಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ಉದ್ರಿಕ್ತರ ಗುಂಪೊಂದು ಗ್ರಾಮದಲ್ಲಿನ ಮನೆಗೆ ಬೆಂಕಿ ಇಟ್ಟಿದೆ. ಮನೆಯಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣ, ಬೈಕ್ ಬೆಂಕಿಗೆ ಆಹುತಿ ಆಗಿವೆ.

ಕೆ.ಜಿ. ಹೊಸಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಅಶ್ವತ್ಥ ಎಂಬ ಯುವಕನನ್ನು ಬರ್ಬರವಾಗಿ‌ ಹತ್ಯೆ ಮಾಡಲಾಗಿತ್ತು. ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಸ್ವಂತ ಭಾವಮೈದುನ ಹಾಗೂ ಸಹಚರರು ಭಾವನನ್ನು ಹತ್ಯೆ ಮಾಡಿದ್ದರು.

ಕೊಲೆ ಆರೋಪಿಯ ದೊಡ್ಡಮ್ಮ ಮಹದೇವಮ್ಮ ಎಂಬುವರ ಮನೆ ಕೆ.ಜಿ. ಹೊಸಹಳ್ಳಿಯಲ್ಲಿದೆ. ಸುದ್ದಿ ತಿಳಿಯುತ್ತಲೇ ಮಹದೇವಮ್ಮ ಮತ್ತು ಕುಟುಂಬಸ್ಥರು ಮನೆ ತೊರೆದಿದ್ದರು. ಕೊಲೆಗೆ ಅವರ ಪ್ರಚೋದನೆ ಕಾರಣ ಎಂಬ ಅನುಮಾನದ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ಮನೆಗೆ ಬೆಂಕಿ ಹಾಕಿದ್ದರು.

ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಘಟನೆ ಸಂಬಂಧ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಸ್ಥಳದಲ್ಲಿ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಡಿವೈಎಸ್‌ಪಿ ದಿನಕರ್‌ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬುಧವಾರ ಬೆಳಿಗ್ಗೆ ಅಶ್ವತ್ಥ ಅಂತ್ಯಕ್ರಿಯೆಯು ಗ್ರಾಮದಲ್ಲಿ ನಡೆಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!