ಬೆಂಗಳೂರು : ಬಿಜೆಪಿ ಪ್ರಲ್ಹಾದ್ ಜೋಷಿ ಅವರನ್ನು ಶೆಟ್ಟರ್ ಅವರ ಮನೆಗೆ ಕಳುಹಿಸಿ ಐಟಿ, ಇಡಿ, ಸಿಬಿಐಗಳ ಹೆಸರಿನಲ್ಲಿ ಬೆದರಿಸುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಒಬ್ಬ ಹಿರಿಯ ರಾಜಕಾರಣಿಗೆ ಬೆದರಿಕೆ ಹಾಕಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯುವ ಪ್ರಯತ್ನ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಪ್ರಲ್ಹಾದ್ ಜೋಷಿ ಅವರು ಕೂಡಲೇ ಶೆಟ್ಟರ್ ಹಾಗೂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಮದು ಅದು ಒತ್ತಾಯಿಸಿದೆ.
ಈ ಕುರಿತಂತೆ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಮಾತನಾಡಿರುವ ವಿಡಿಯೊವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ಜಗಜ್ಯೋತಿ ಬಸವಣ್ಣರನ್ನು ಅವಮಾನಿಸಿದ್ದೂ ಅಲ್ಲದೆ ಅಕ್ಕಮಹಾದೇವಿ ಸೇರಿದಂತೆ ಶರಣರ ವಚನಗಳನ್ನು ಪಠ್ಯದಿಂದ ಕೈಬಿಟ್ಟು ಅವಮಾನಿಸಿತ್ತು ಲಿಂಗಾಯತವಿರೋಧಿಬಿಜೆಪಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಸಮಾನತೆ, ಸಾಮರಸ್ಯವನ್ನು ಸಾರುವ ಲಿಂಗಾಯತ ತತ್ವವೆಂದರೆ ಬಿಜೆಪಿಗೆ ಮೊದಲಿಂದಲೂ ಅಸಹನೆ ಇದೆ. ಈಗ ಆ ಅಸಹನೆ ರಾಜಕೀಯ ನಾಯಕರ ಮೇಲೆ ತಿರುಗಿದೆ ಎಂದು ಟೀಕಿಸಿದೆ.





