Mysore
19
scattered clouds

Social Media

ಗುರುವಾರ, 16 ಜನವರಿ 2025
Light
Dark

ವೈಡ್ ಆಂಗಲ್: ಸರ್ಕಾರಗಳು ಮನರಂಜನೋದ್ಯಮದಿಂದ ದೂರವಾಗುತ್ತಿವೆಯೇ?

 2023-24ರ ಸಾಲಿನ ಮುಂಗಡ ಪತ್ರವನ್ನು ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರುಸಿನಿಮಾ ಪ್ರಮಾಣೀಕರಣ ಹೊರತುಪಡಿಸಿದರೆ ಅದು ಕೇಂದ್ರದ ವಿಷಯವಲ್ಲಅದೇನಿದ್ದರೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದುಅಲ್ಲೇನಿದ್ದರೂ ವಾರ್ತಾ ಮತ್ತು ಪ್ರಸಾರ ಸಚಿವಾಲಯಅದರ ಕೈಕೆಳಗಿನ ಪ್ರಸಾರಭಾರತಿ ಮುಂತಾದವುಗಳಿಗೆ ಸಂಬಂಧಪಟ್ಟಂತೆ ಅನುದಾನ ಇತ್ಯಾದಿ ಇರಬಹುದು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಸಂಬಂಧ ಪಟ್ಟಂತೆಈಗ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಪ್ರಶ್ನೆ ಕೇಳಲಾಗುತ್ತಿದೆಅದಕ್ಕೆ ಕಾರಣವೂ ಇಲ್ಲದಿಲ್ಲ. 2022ರ ಡಿಸೆಂಬರ್ 31ರಂದು ಕೇಂದ್ರ ಸರ್ಕಾರಚಲನಚಿತ್ರಗಳಿಗೆ ಸಂಬಂಧಪಟ್ಟಂತೆ ನಾಲ್ಕು ವಿಭಾಗಗಳನ್ನು ಮುಚ್ಚಿತುಚಲನಚಿತ್ರೋತ್ಸವ ನಿರ್ದೇಶನಾಲಯರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರಮಕ್ಕಳ ಚಲನಚಿತ್ರ ಸಮಾಜ ಮತ್ತು ಫಿಲಂಸ್ ಡಿವಿಜನ್ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಹಮ್ಮಿಕೊಳ್ಳುವುದೇ ಮೊದಲಾದ ಕೆಲಸಗಳು ಚಲನಚಿತ್ರೋತ್ಸವ ನಿರ್ದೇಶನಾಲಯದ್ದಾಗಿತ್ತುಪ್ರಾಚ್ಯಾಗಾರವಂತೂ ದೇಶವಿದೇಶಗಳ ಹಳೆಯ ಚಿತ್ರಗಳಚಿತ್ರಗಳಿಗೆ ಸಂಬಂಧಿಸಿದ ಪ್ರಕಟಣೆವಸ್ತುಗಳ ಭಂಡಾರಮಕ್ಕಳ ಚಲನಚಿತ್ರಗಳ ನಿರ್ಮಾಣಮಕ್ಕಳ ಚಲನ ಚಿತ್ರೋತ್ಸವ ಇತ್ಯಾದಿ ಮಕ್ಕಳ ಚಿತ್ರಸಮಾಜದ ಜವಾಬ್ದಾರಿಯಾಗಿತ್ತುಫಿಲಂ ಡಿವಿಜನ್ ಸಾಕ್ಷ್ಯ ಚಿತ್ರಗಳ ಮತ್ತು ಸುದ್ದಿಚಿತ್ರಗಳನ್ನು ತಯಾರಿಸುವಸಂಗ್ರಹಿಸುವ ಪ್ರದರ್ಶಿಸುವ ವಿಭಾಗವಾಗಿತ್ತು.

ಈಗ ಈ ನಾಲ್ಕೂ ವಿಭಾಗಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಕೈಕೆಳಗೆ ತರಲಾಗಿದೆನಿಗಮ ಈ ನಾಲ್ಕು ವಿಭಾಗಗಳನ್ನು ಹೇಗೆ ನಿಭಾಯಿಸುತ್ತದೆ ನೋಡಬೇಕು. 2021ರ ಸಾಲಿನ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ತಿಂಗಳುಗಳೇ ಕಳೆದಿವೆಈ ಬಾರಿಯ ಆಯ್ಕೆಯನ್ನು ನಿಗಮ ಸ್ವತಂತ್ರವಾಗಿ ಮಾಡುತ್ತದೋಇಲ್ಲವೇ ವಾರ್ತಾ ಇಲಾಖೆಯ ಮೇಲುಸ್ತುವಾರಿಯಲ್ಲಿ ಮಾಡುತ್ತದೋ ಕಾದು ನೋಡಬೇಕುಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಹಿಂದಿನ ವರ್ಷದಲ್ಲಿ ತಯಾರಾದ ಚಿತ್ರಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸುವುದಿದೆತಿಂಗಳು ಕಳೆದರೂ 2022ರ ಸಾಲಿಗೆ ಇನ್ನೂ ಅರ್ಜಿ ಕರೆದಿಲ್ಲ.

ಕೇಂದ್ರದ ಮಾತು ಹಾಗಿರಲಿಈ ತಿಂಗಳ ಹದಿನೇಳರಂದು ರಾಜ್ಯ ಮುಂಗಡಪತ್ರವನ್ನು ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆಚಿತ್ರರಂಗದ ಕುರಿತಂತೆ ಅವರು ಬಹಳ ಉದಾರಿಗಳು ಎನ್ನುವುದು ಕಳೆದ ವರ್ಷ ೧೨೫ರಿಂದ ೨೦೦ ಚಿತ್ರಗಳಿಗೆ ಸಹಾಯಧನ ಏರಿಸಿದಾಗಲೇ ತಿಳಿಯಿತುಉದ್ಯಮದ ಪ್ರತಿನಿಧಿಗಳು ಈಗ ಕೊಡುವ 125ರ ಬದಲು 175 ಚಿತ್ರಗಳಿಗೆ ಸಹಾಯ ಧನ ನೀಡಲು ಒತ್ತಾಯಿಸಿದ್ದರುಇನ್ನೂ ಇಪ್ಪತ್ತೈದು ಸೇರಿಸಿದರು ಮುಖ್ಯಮಂತ್ರಿಗಳು.

ಅವರೇನೋ 200 ಚಿತ್ರಗಳಿಗೆ ಸಹಾಯಧನ ಎಂದು ಸಹಿ ಮಾಡಿದರುಆದರೆ ಅದು ಸಿಗುವುದು ಯಾವಾಗಸಹಾಯಧನ ಆಯ್ಕೆನೀತಿಯಲ್ಲಿ ಮಾರ್ಪಾಡು ಮಾಡಿಸಕಾಲದಲ್ಲಿ ಅದು ದೊರಕುವಂತೆ ಮಾಡಲು ಸಾಧ್ಯವಾಯಿತೇ ಎನ್ನುವುದನ್ನು ಗಮನಿಸಬೇಕುಈಗಾಗಲೇ ಈ ವಿಷಯ ಬೇರೆ ಸಂದರ್ಭ ದಲ್ಲಿಇದೇ ಅಂಕಣದಲ್ಲಿ ಪ್ರಸ್ತಾಪವಾಗಿದೆ. 2018ನೇ ಸಾಲಿನ ಸಹಾಯಧನ ಮತ್ತು ರಾಜ್ಯ ಪ್ರಶಸ್ತಿಗಳ ವಿಲೇವಾರಿಗೆ ತಕರಾರಿದೆಬಹುಶಃ ಕೆಲವರಿಗೆ ಸಹಾಯಧನ ನೀಡಲಾಗಿದೆಚಲನಚಿತ್ರ ಸೆನ್ಸಾರಾದ ದಿನಾಂಕದ ಗೊಂದಲದಿಂದ ಕೆಲವು ಚಿತ್ರಗಳುಆಯ್ಕೆಯಾಗಿದ್ದರೂ ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದರಿಂದ ತಡೆ ಇದೆಆ ಸಾಲಿನ ಪ್ರಶಸ್ತಿ ಆಯ್ಕೆಯೂ ಅದರ ಅಧ್ಯಕ್ಷರು ಮತ್ತು ಇಲಾಖೆಯ ಕಾರಣದಿಂದ ನ್ಯಾಯಾಲಯದಲ್ಲಿದೆ ಎನ್ನಲಾಗಿದೆ.

2019ರ ಸಾಲಿನ ಪ್ರಶಸ್ತಿಗೆ ಮತ್ತು ಸಹಾಯಧನ ನೀಡಲು ಆ ವರ್ಷ ತಯಾರಾದ ಚಿತ್ರಗಳ ನಿರ್ಮಾಪಕರಿಂದ ಅರ್ಜಿಗಳನ್ನು ಕರೆದು ವರ್ಷಗಳಾಗಿವೆಕಳೆದ ವರ್ಷ 2020 ಸಹಾಯಧನಕ್ಕಾಗಿ ಆಯಾ ಸಾಲಿನಲ್ಲಿ ಚಿತ್ರ ನಿರ್ಮಿಸಿದ ನಿರ್ಮಾಪಕರಿಂದ ಅರ್ಜಿಗಳನ್ನು ಕರೆಯಬೇಕಷ್ಟೆಇವುಗಳು ಪೂರ್ತಿ ಆಗಬೇಕಾದರೆ ಕನಿಷ್ಠ ಎಂದರೂ ಆರು ತಿಂಗಳಾಗಬಹುದು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಪನೋರಮಾ ಆಯ್ಕೆಗೆ ತೀರ್ಪುಗಾರರಾಗಿ ಹೋಗುವವರು ಪ್ರತಿದಿನ ಐದು ಇಲ್ಲವೇ ಆರು ಚಿತ್ರಗಳನ್ನು ವೀಕ್ಷಿಸಿದರೆಇಲ್ಲಿ ನಾಲ್ಕು ಚಿತ್ರಗಳನ್ನು ವೀಕ್ಷಿಸಲೂ ಹಿಂದೇಟು ಹಾಕುತ್ತಾರೆ ಎನ್ನಲಾಗಿದೆಹಾಗಾಗಿಯೇ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ.

ಸರ್ಕಾರ ಸಹಾಯಧನ ನೀತಿಯನ್ನು ಹೊಸ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಮರುಪರಿಶೀಲಿಸಿಬದಲಾಯಿಸಬೇಕಾದ ಅಗತ್ಯವಿದೆಕೋಟಿಗಟ್ಟಲೆ ಬಂಡವಾಳದ ಚಿತ್ರಗಳು ಕನ್ನಡದಲ್ಲಿ ತಯಾರಾಗಿವೆಆಗುತ್ತಿವೆಸಾವಿರಕೋಟಿ ಗಳಿಕೆ ಮಾಡಿ ದಾಖಲೆ ಮಾಡುತ್ತಿವೆಇದೇ ಸಂದರ್ಭದಲ್ಲಿ ಸರ್ಕಾರ ನೀಡುವ ಸಹಾಯಧನದ ಅರ್ಧಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಸಿನಿಮಾ ತಯಾರಿಸುವ ಮಂದಿಯೂ ಇದ್ದಾರೆಮೂಲಗಳ ಪ್ರಕಾರ ಇಂತಹ ಚಿತ್ರಗಳನ್ನು ನಿರ್ಮಿಸಿಸಹಾಯಧನ ಪಡೆಯುವ ದೊಡ್ಡ ವರ್ಗವೇ ಇದೆ!

2011ರಲ್ಲಿ ಐದು ವರ್ಷಕ್ಕೆಂದು ಪ್ರಕಟವಾದ ಚಲನಚಿತ್ರ ನೀತಿ ಸಮಗ್ರವಾಗಿರಲಿಲ್ಲಆಗಿನ್ನೂ ಸೆಲ್ಯುಲಾಯ್ಡ್ ಪೂರ್ತಿಯಾಗಿ ಬದಲಾಗಿಲ್ಲದ ದಿನಗಳುಈಗ ಪೂರ್ತಿಯಾಗಿ ಡಿಜಿಟಲ್‌ಗೆ ಸಿನಿಮಾ ಹೊರಳಿದೆಈಗಿನ ಅಗತ್ಯಗಳುಮೂಲ ಸೌಲಭ್ಯಗಳುಪ್ರದರ್ಶನ ವ್ಯವಸ್ಥೆ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಲನಚಿತ್ರ ನೀತಿ ಬರಬೇಕಾಗಿದೆ.

ಹಿಂದೆ, 1994ರಲ್ಲಿ ತಜ್ಞರ ಸಮಿತಿಯೊಂದು ಸಮಗ್ರ ಅಧ್ಯಯನ ನಡೆಸಿವರದಿಯೊಂದನ್ನು ನೀಡಿತ್ತುಅದರ ಹಲವು ಶಿಫಾರಸುಗಳಲ್ಲಿ ಒಂದು ಚಲನಚಿತ್ರ ಅಕಾಡೆಮಿ. ?ಚಲನಚಿತ್ರದಲ್ಲಿ ಶಿಕ್ಷಣಶಿಕ್ಷಣದಲ್ಲಿ ಚಲನಚಿತ್ರ’ ಎನ್ನುವ ಘೋಷವಾಕ್ಯದೊಂದಿಗೆತಡವಾಗಿಯಾದರೂ ಆರಂಭವಾದ ಅಕಾಡೆಮಿಅದರ ಧ್ಯೇಯೋದ್ದೇಶಗಳನ್ನು ಈಡೇರಿಸಲು ಇನ್ನೂ ಪೂರ್ತಿಯಾಗಿ ಸಾಧ್ಯವಾಗುತ್ತಿಲ್ಲಅದರದೇ ಆದ ಒಂದು ಕಟ್ಟಡ ಇದೆಅಲ್ಲಿನ ಪ್ರದರ್ಶನ ಮಂದಿರವಿನ್ನೂ ಪೂರ್ತಿಯಾಗಿ ಪ್ರದರ್ಶನಕ್ಕೆ ತೆರೆದಿಲ್ಲಚಲನಚಿತ್ರ ಭಂಡಾರಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳಿಗಾಗಿ ಸರ್ಕಾರದಿಂದ ಇನ್ನೂ ಅನುದಾನ ಬಂದಿಲ್ಲ ಎನ್ನಲಾಗಿದೆಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಫೆಬ್ರವರಿ ಕೊನೆಯವಾರಮಾರ್ಚ್ ಮೊದಲ ವಾರ ನಡೆಯುವುದಿತ್ತುಕಳೆದ ವರ್ಷ ಮಾರ್ಚ್ ೩ರಂದು ಚಿತ್ರೋತ್ಸವ ಉದ್ಘಾಟನೆ ಆದಾಗಮುಖ್ಯಮಂತ್ರಿಗಳು ಇನ್ನು ಪ್ರತಿ ವರ್ಷ ಮಾರ್ಚ್ ೩ರಂದೇ ಚಿತ್ರೋತ್ಸವ ಆರಂಭ ಆಗಲಿದೆ ಎಂದು ಪ್ರಕಟಿಸಿದರಲ್ಲದೆಅದನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ ಎಂದು ಆಚರಿಸುವುದಾಗಿಯೂ ಹೇಳಿದರುಮಾರ್ಚ್ 3 ಕನ್ನಡದ ಮೊದಲ ಮಾತಿನ ಚಿತ್ರ ‘ಸತಿ ಸುಲೋಚನಾ’ ತೆರೆಕಂಡ ದಿನ.

14ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ದಿನಾಂಕ ಕೂಡ ನಿಗದಿಯಾಗಿಲ್ಲಈ ನಡುವೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಗಡ ಪತ್ರದ ಚರ್ಚೆಯ ವೇಳೆ ಉದ್ಯಮದ ಬೇಡಿಕೆಗಳನ್ನು ಮುಂದಿಟ್ಟಿದೆಬಹುಶಃ ಅವುಗಳಲ್ಲಿ ಮುಖ್ಯವಾಗಿ ಮೈಸೂರಿನಲ್ಲಿನ ಚಿತ್ರನಗರಿ ಯೋಜನೆಗೆ ಸಂಬಂಧಪಟ್ಟಂತೆ ಇದೆ ಎನ್ನಲಾಗಿದೆ.

ಕೊನೆಗೂ ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಯಾಗಿದೆಚಿತ್ರರಂಗದ ಗಣ್ಯರಿಗೆಪ್ರಾತಿನಿಧಿಕ ಸಂಸ್ಥೆಗಳ ಮುಖ್ಯರಿಗೆ ಸೇರಿದಂತೆ ಸಂಬಂಧಪಟ್ಟವರಿಗೆ ಆಹ್ವಾನ ಇರಲಿಲ್ಲಅವರೆಲ್ಲ ಈ ಕುರಿತು ಸಂಬಂಧಪಟ್ಟವರೊಂದಿಗೆ ತಮ್ಮ ನೋವನ್ನು ಹಂಚಿಕೊಂಡದ್ದಾಗಿ ತಿಳಿದು ಬಂದಿದೆವಾರ್ತಾ ಇಲಾಖೆಯ ಕಾರ್ಯಕ್ರಮವಾದರೂಇದರ ಟ್ರಸ್ಟ್ ಪೂರ್ತಿ ಈ ಕೆಲಸಗಳ ಜವಾಬ್ದಾರಿ ವಹಿಸಿಕೊಂಡಿದ್ದುಹೀಗಾಗಿದೆಯಂತೆ.

ಬೆಂಗಳೂರಿನಲ್ಲಿ ರಾಜಕುಮಾರ್ ಸ್ಮಾರಕ ಉದ್ಘಾಟನೆಯಾದಾಗನೆರೆ ರಾಜ್ಯಗಳಿಂದಲೂ ಕಲಾವಿದರನ್ನು ಕರೆಸಲಾಗಿತ್ತುಈ ಬಾರಿ ಇಲ್ಲಿನವರಿಗೇ ಆಹ್ವಾನ ಇರಲಿಲ್ಲ ಎನ್ನಲಾಗಿದೆಈ ಕುರಿತಂತೆ ಸಮಜಾಯಿಷಿಸಮಾಧಾನಗಳು ಸಿಗುವುದು ಕಷ್ಟಸರ್ಕಾರದ ಕೆಲಸ ದೇವರ ಕೆಲಸದೇವರು ಕೊಟ್ಟರೂ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ