ಮೈಸೂರು ನಗರವು ಶಿಕ್ಷಣ, ಕಲೆ,ಸಂಸ್ಕೃತಿ, ಕ್ರೀಡೆ, ಜನಪದ, ಕೃಷಿ ಚಟುವಟಿಕೆ, ಸಂಘಟನೆ ಮುಂತಾದ ವಿಚಾರಗಳಲ್ಲಿ ಹೆಸರುವಾಸಿಯಾಗಿದೆ. ಆದರೆ ಇತ್ತೀಚೆಗೆ ನಗರದಲ್ಲಿ ಮಾದಕ ದ್ರವ್ಯ ಜಾಲ ಪತ್ತೆಯಾಗಿರುವುದು ಆತಂಕದ ಸಂಗತಿ. ಈ ಕೃತ್ಯದಲ್ಲಿ ತೊಡಗಿದ್ದ ೮ ಜನರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ.
ಆದರೆ ಬೆಂಗಳೂರು ಸೇರಿದಂತೆ ದೇಶದ ಇತರೆ ನಗರಗಳಿಗೆ ಮಾದಕ ದ್ರವ್ಯ ಜಾಲವು ವ್ಯಾಪಿಸಿದ್ದು, ಇದು ಯುವ ಸಮೂಹಕ್ಕೆ ಮಾರಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೊಲೀಸ್ ಅಧಿಕಾರಗಳ ವಿಶೇಷ ತಂಡವನ್ನು ರಚಿಸಿ ಮಾದಕ ದ್ರವ್ಯವನ್ನು ಸರಬರಾಜು ಮಾಡುವ ಎಲ್ಲ ಜಾಲಗಳನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಯುವ ಜನಾಂಗಕ್ಕೆ ಮಾರಕವಾಗಿರುವ ಮಾದಕ ವಸ್ತು ಸರಬರಾಜು ಜಾಲವನ್ನು ಮಟ್ಟಹಾಕಬೇಕಾಗಿದೆ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು





