Mysore
17
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಗೃಹಲಕ್ಷ್ಮೀ ಹಣದಿಂದ ಬದುಕು ಕಟ್ಟಿಕೊಂಡ ತಾಯಮ್ಮ

ಸುತ್ತೂರು ನಂಜುಂಡನಾಯಕ

ಸುತ್ತೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ತಾಯಮ್ಮನವರು ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಬಂದ ೩-೪ ತಿಂಗಳ ಹಣವನ್ನು ಕೂಡಿಟ್ಟುಕೊಂಡು ಮೊದಲಿಗೆ ಎರಡು ಮೇಕೆಗಳನ್ನು ಖರೀದಿಸಿ, ನಂತರ ಅದರಿಂದ ಬಂದ ಲಾಭದಲ್ಲಿ ಮತ್ತೆ ೨ ಮೇಕೆ ಗಳನ್ನು ಖರೀದಿಸಿದೆ. ಅವುಗಳು ಮರಿ ಹಾಕಿ ೬ರಿಂದ ೮ ಮೇಕೆಗಳಾದ ಬಳಿಕ ಕೆಲವನ್ನು ಬೇರೆಯವರಿಗೆ ಮಾರಾಟ ಮಾಡಿ ಲಾಭ ಗಳಿಸಿದೆ.

ಹೀಗೆ ಬಂದ ಹಣವನ್ನು ನಾನು ಜೀವನೋಪಾಯಕ್ಕೆ ಬಳಸಿದ್ದೇನೆ. ಮೊದಲು ಬಂದ ೨ ಸಾವಿರ ರೂ. ಗಳನ್ನು ಕೂಡಿಟ್ಟುಕೊಂಡು ಮತ್ತೆ ೩ ತಿಂಗಳ ಹಣವನ್ನು ಸೇರಿಸಿ ಮೇಕೆಗಳನ್ನು ಖರೀದಿಸಿ ಅವುಗಳ ಮೂಲಕ ಜೀವನ ಕಟ್ಟಿಕೊಂಡಿದ್ದೇನೆ. ನನ್ನ ಮೊಮ್ಮಕ್ಕಳನ್ನು ಓದಿಸಲು ಈ ಹಣವನ್ನೇ ಬಳಸಿ ಕೊಂಡಿದ್ದೇನೆ.

ನನ್ನಂತಹ ಅನೇಕ ಬಡವರು ಬದುಕಲು ಸಿದ್ದರಾಮಯ್ಯ ಅವರು ಜಾರಿಗೊಳಿಸಿರುವ ಗೃಹ ಲಕ್ಷ್ಮಿ ಯೋಜನೆ ನೆರವಾಗುತ್ತಿದೆ ಎಂದು ಸುತ್ತೂರು ತಾಯಮ್ಮ ತಿಳಿಸಿದರು.

Tags:
error: Content is protected !!