Mysore
24
mist

Social Media

ಗುರುವಾರ, 12 ಮಾರ್ಚ್ 2026
Light
Dark

ಓದುಗರ ಪತ್ರ: ಕೆ.ಆರ್ ವೃತ್ತದಲ್ಲಿರುವ ಕಲ್ಲು ತೆರವುಗೊಳಿಸಿ

ಓದುಗರ ಪತ್ರ

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಕಡೆಯಿಂದ ಬಂದು ಕೆ.ಆರ್.ವೃತ್ತದ ಬಲ ಭಾಗ ಅಂದರೆ ಸಯ್ಯಾಜಿರಾವ್ ರಸ್ತೆಗೆ ತಿರುಗುವ ತಿರುವಿನಲ್ಲಿ ಕಲ್ಲೊಂದು ಕಿತ್ತು ಮೇಲೆ ಬಂದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಎಷ್ಟೋ ಜನ ವಾಹನ ಸವಾರರು ಇದನ್ನು ಗಮನಿಸಿಲ್ಲ. ವೃತ್ತದ ಕಲ್ಲಿಗೆ ಇದು ಸೇರಿಕೊಳ್ಳದೆ ಬೇರ್ಪಟ್ಟಿದೆ.

ಕಲ್ಲಿಗೆ ಬಣ್ಣ ಬಳಿದಿರುವುದರಿಂದ ಇದು ಯಾರ ಗಮನಕ್ಕೆ ಬರುವುದಿಲ್ಲ. ಪಾಲಿಕೆಯವರು ಆದಷ್ಟು ಬೇಗ ಈ ಕಲ್ಲನ್ನು ಬೇರ್ಪಡಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಿದೆ.

– ಆರ್.ಯಶಸ್ ಪ್ರಭು, ವಿಜಯನಗರ ೧ನೇ ಹಂತ, ಮೈಸೂರು

Tags:
error: Content is protected !!