ಕೇಡಿಗೆ ಮೂಲ ಯುದ್ಧ!
ಕೊನೆಗೂ ಘೋಷಣೆಯಾಗಿದೆ
ಇರಾನ್-ಇಸ್ರೇಲ್ ಕದನ ವಿರಾಮ!
ಇದು ಜನಜಗದ ಸದಾಶಯ
ಕೇಡಿಗೆ ಮೂಲ ವಿನಾಶಕೆ ದಾರಿ
ಯುದ್ಧ ಯುದ್ಧೋನ್ಮಾದ!
ನೆಮ್ಮದಿ ಶಾಂತಿ ತರದು ಜಗಕೆ
ಬಿಡಬೇಕು ಪ್ರತಿಷ್ಠೆಯ, ನಾಯಕಮಣಿಗಳು!
ಚರ್ಚೆ ಸಂಧಾನದಲಿ ಫಲಿತವಿದೆ
ಜಗ ಅರಿತು ಆಚರಿಸಲಿ
ಗಾಂಧಿ ಮಹಾತ್ಮನ ಅಹಿಂಸಾ ತತ್ವವ
– ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು





