Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಓದುಗರ ಪತ್ರ: ಸಮುದಾಯ ಭವನ ದುರಸ್ತಿಗೊಳಿಸಿ

ಎಚ್.ಡಿ.ಕೋಟೆ ತಾಲ್ಲೂಕಿನ ಹುಣಸೇಕುಪ್ಪೆ ಗ್ರಾಮದಲ್ಲಿ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಯ ವತಿಯಿಂದ ನಿರ್ಮಿಸಲಾಗಿರುವ ಸಮುದಾಯ ಭವನವು ನಿರ್ವಹಣೆಯ ಕೊರತೆಯಿಂದಾಗಿ ಶಿಥಿಲಗೊಂಡಿದ್ದು, ಸಾರ್ವಜನಿಕ ಉಪಯೋಗದಿಂದ ದೂರಾಗಿದೆ.

ಗ್ರಾಮದಲ್ಲಿನ ಈ ಸಮುದಾಯ ಭವನವನ್ನು ನಿರ್ಮಿಸಿ ಸುಮಾರು 20 ವರ್ಷಗಳಾಗಿದೆ. ಹಿಂದೆ ಈ ಸಮುದಾಯ ಭವನದಲ್ಲಿ ವಿವಿಧ ಕಾರ್ಯಕ್ರಮಗಳು, ಸಭೆಗಳು ನಡೆಯುತ್ತಿದ್ದವು. ಅಲ್ಲದೆ ಬಡ ವರ್ಗದ ಜನರು ಮದುವೆ, ನಾಮಕರಣ, ನಿಶ್ಚಿತಾರ್ಥಗಳನ್ನು ಮಾಡುತ್ತಿದ್ದರು. ಈಗ ಸಮುದಾಯ ಭವನ ಶಿಥಿಲಗೊಂಡು ಜನೋಪಯೋಗದಿಂದ ದೂರಾಗಿದೆ. ಇನ್ನು ಈ ಕಟ್ಟಡದ ಮೇಲ್ಛಾವಣಿಗೆ ಸೀಟ್‌ಗಳೆಲ್ಲ ತುಕ್ಕು ಹಿಡಿದು ತೂತು ಬಿದ್ದಿವೆ.

ಇದರಿಂದಾಗಿ ಮಳೆ ನೀರು ಸೋರುತ್ತಿದೆ. ಕಟ್ಟಡದ ಗೋಡೆಗಳೂ ಬಿರುಕು ಬಿಟ್ಟಿದ್ದು, ಕುಸಿದುಬೀಳುವ ಅಪಾಯದಲ್ಲಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸಮುದಾಯ ಭವನವನ್ನು ದುರಸ್ತಿಗೊಳಿಸಬೇಕಿದೆ.
-ಸಂಜಯ್, ಹುಣಸೇಕುಪ್ಪೆ ಎಚ್.ಡಿ.ಕೋಟೆ ತಾ.

 

 

Tags: