Mysore
28
clear sky

Social Media

ಗುರುವಾರ, 05 ಮಾರ್ಚ್ 2026
Light
Dark

ಓದುಗರ ಪತ್ರ: ಶಾಲಾ ಪ್ರವೇಶಾತಿಗೆ ವಯೋಮಿತಿ ಸಡಿಲಿಸಿ

ಓದುಗರ ಪತ್ರ

ಒಂದನೇ ತರಗತಿ ಪ್ರವೇಶಕ್ಕೆ ಜೂನ್ ೧ರ ಕಟ್ಟುನಿಟ್ಟಿನ ವಯೋಮಿತಿ ನಿಗದಿಪಡಿಸಿರುವುದು ರಾಜ್ಯದ ಸುಮಾರು ೨.೩೦ ಲಕ್ಷ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೆ ಮಾರಕವಾಗಿದೆ. ಕೇವಲ ಒಂದು ವಾರ ಅಥವಾ ಒಂದು ತಿಂಗಳ ಅಂತರದಿಂದ ಮಗುವಿನ ಅಮೂಲ್ಯವಾದ ಒಂದು ವರ್ಷ ನಷ್ಟವಾಗುವುದು ಕೇವಲ ಅಂಕಿ ಅಂಶವಲ್ಲ, ಅದು ಆ ಮಗುವಿನ ಕಲಿಕೆಯ ಹಾದಿಯಲ್ಲಿ ಉಂಟಾಗುವ ದೊಡ್ಡ ಅಡೆತಡೆ. ಕೇರಳ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಈಗಾಗಲೇ ೯೦ ದಿನಗಳ ಕಾಲಮಿತಿ ಸಡಿಲಿಕೆ ಮಾಡಿ ಮಕ್ಕಳ ಹಿತ ಕಾಯುತ್ತಿವೆ. ರಾಜ್ಯ ಸರ್ಕಾರ ಕೂಡ ವಯೋಮಿತಿಯಲ್ಲಿ ಈ ಸಡಿಲಿಕೆ ತರುವ ಮೂಲಕ ಲಕ್ಷಾಂತರ ಪೋಷಕರ ಆತಂಕವನ್ನು ದೂರಮಾಡಿ ಮಕ್ಕಳಿಗೆ ತಾರತಮ್ಯವಿಲ್ಲದ ಶಿಕ್ಷಣದ ಹಕ್ಕು ನೀಡಬೇಕು.

-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!