ಬಾ ಮಳೆಯೇ ಬಾ..
ನೊಂದು – ಬೆಂದು ಬಸವಳಿದ
ರೈತನ ಬಾಳಿಗೆ ಹೂವಾಗಿ ಬಾ
ಕಾದ ಭೂತಾಯ ಒಡಲಿಂಗೆ
ಹನಿ ಹನಿಯಾಗಿ ಬಾ..
ದನಿ ಇಲ್ಲದವರ ಬಾಳಿಗೆ
ದನಿಯಾಗಿ ಬಾ
ಕಲ್ಲು ಹೃದಯವೂ ಕರಗುವಂತೆ ಬಾ
ಆದರೆ, ನೀನೇ ಕಗಿ ಮಾತ್ರ
ಇಳೆಗೆ ಇಳಿಯಬೇಡ
ಆಲಿಕಗಿ ಸುರಿದು
ಗಾಯದ ಮೇಲೆ
ಉಪ್ಪು ಸುರಿದಂತಾಗಬೇಡ !
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು





